Advertisement

Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ: ಸಚಿವ ತಿಮ್ಮಾಪುರ ವಿರುದ್ಧ ದೂರು

09:38 PM Jan 22, 2024 | Team Udayavani |

ಬೆಂಗಳೂರು: ಅಬಕಾರಿ ಇಲಾಖೆಯ ಡಿಸಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ಗಳಿಂದ ದುಡ್ಡು ಪಡೆದು ವರ್ಗಾವಣೆ ಮಾಡುತ್ತಿದ್ದಾರೆಂದು ಆರೋಪಿಸಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಜಾರಿ ನಿರ್ದೇಶನಾಲಯಕ್ಕೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ.

Advertisement

ಲೋಕಸಭಾ ಚುನಾವಣೆಗೆ ಹಣ ಹೊಂದಿಸುವ ಕಾರಣಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಗಾಗಿ 30 ಲಕ್ಷ ರೂ.ಯಿಂದ 3 ಕೋಟಿ ರೂ.ವರೆಗೂ ಒಟ್ಟು 18 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ. ಆ ಪೈಕಿ ಅಂದಾಜು 13 ಕೋಟಿ ರೂ.ಯಷ್ಟು ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ತಲುಪಿದೆ. 50 ಲಕ್ಷ ರೂ.ನಿಂದ 1 ಕೋಟಿಯಷ್ಟು ಸಚಿವರ ಸಹಾಯಕ, ಕಾರ್ಯದರ್ಶಿಗೆ ಸಿಕ್ಕಿದೆ. 3 ಕೋಟಿ ರೂ. ಕೋಲಾರದ ಅಬಕಾರಿ ಡಿಸಿಗಳಾದ ಬಸವರಾಜ ಸಂದಿಗ್ವಾಡ್‌, ರಂಗಪ್ಪ ಹಾಗೂ ಬೆಂಗಳೂರು ದಕ್ಷಿಣದ ಅಬಕಾರಿ ಡಿಸಿ ವಿವೇಕ್‌ಗೆ ತಲುಪಿದೆ. ಸರಕಾರವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ಆದ್ದರಿಂದ ಇ.ಡಿ. ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಿನೇಶ್‌ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next