Advertisement

ಹೊಸಬರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ

10:58 AM May 01, 2019 | Lakshmi GovindaRaju |

ಬಹುತೇಕ ಹೊಸಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು.

Advertisement

ಜನನಿ ಫಿಲಂಸ್‌ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್‌ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ತ್ರಿವೇಣಿ ಕೃಷ್ಣ, ಶೌರ್ಯ, ಶಂಕರ್‌ ಅಶ್ವತ್ಥ್, ನಿಖೀಲ್‌ ಗೌಡ, ಸುಮಂತ್‌, ಭಾರತಿ, ರಘು ರಾಮನ್‌, ಧನು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಸತೀಶ್‌ ರಾಜೇಂದ್ರನ್‌ ಛಾಯಾಗ್ರಹಣ, ಉಜ್ವಲ್‌ಗೌಡ ಸಂಕಲನ ಕಾರ್ಯವಿದೆ. ಚಿತ್ರದ ತೃತೀಯ ಹಂತದ ಚಿತ್ರೀಕರಣವು ಮೇ ಮೊದಲವಾರ ದಿಂದ ಸಕಲೇಶಪುರದಲ್ಲಿ ಆರಂಭಿಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಚಿತ್ರಕ್ಕೆ ಪ್ರಶಾಂತ್‌ ವೈ.ಎನ್‌, ಅಭಿನಂದನ್‌ ದೇಶಪ್ರಿಯ ಸಂಭಾಷಣೆ, ಚಿತ್ರದ ಹಾಡುಗಳಿಗೆ ಜಯರಾಜ್‌ ಸಂಗೀತ, ನಾಗಭೂಷಣ್‌ ಸಾಹಿತ್ಯವಿದೆ. ಚಿತ್ರಕ್ಕೆ ರತ್ನತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next