Advertisement

ಚುನಾವಣಾ ಕರ್ತವ್ಯ ವೇಳೆ ಅಸುನೀಗಿದವರಿಗೆ 1ಕೋಟಿ ಪರಿಹಾರ ಕೊಡಿ : ಅಲಹಾಬಾದ್‌ ಹೈಕೋರ್ಟ್‌

08:22 PM May 12, 2021 | Team Udayavani |

ಅಲಹಾಬಾದ್‌: ಉತ್ತರ ಪ್ರದೇಶದಲ್ಲಿ ಮುಕ್ತಾಯಗೊಂಡ ಪಂಚಾಯಿತಿ ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸಿ ಸೋಂಕಿನಿಂದ ಅಸುನೀಗಿದ ಸಿಬ್ಬಂದಿಗೆ ಕನಿಷ್ಠ 1 ಕೋಟಿ ರೂ. ಪರಿಹಾರ ನೀಡಲೇಬೇಕು.

Advertisement

ಹೀಗೆಂದು ಅಲಹಾಬಾದ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಸದ್ಯ ಸೋಂಕಿನಿಂದ ಅಸುನೀಗಿದವರಿಗೆ ನೀಡುತ್ತಿರುವ 30 ಲಕ್ಷ ರೂ. ಪರಿಹಾರ ಏನೇನೂ ಸಾಲದು. ರಾಜ್ಯ ಸರ್ಕಾರ ಮತ್ತು ಉ.ಪ್ರ.ರಾಜ್ಯ ಚುನಾವಣಾ ಆಯೋಗ ಇಲಾಖೆಗಳ ಸಿಬ್ಬಂದಿಯನ್ನು ಸೋಂಕಿನಿಂದ ಸೂಕ್ತ ರಕ್ಷಣೆ ನೀಡದೆ, ಬಲವಂತವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತು.

ಮೇ 7ರಂದು ಚುನಾವಣಾ ಆಯೋಗದ ಪರ ವಕೀಲ ತರುಣ್‌ ಅಗರ್ವಾಲ್‌ ನೀಡಿದ ಮಾಹಿತಿ ಪ್ರಕಾರ ಚುನಾವಣಾ ಕರ್ತವ್ಯದಲ್ಲಿದ್ದ 77 ಮಂದಿ ಅಸುನೀಗಿದ್ದರು ಎಂದು ಅರಿಕೆ ಮಾಡಿದ್ದರು.

ಇದನ್ನೂ ಓದಿ :ಆಕ್ಸಿಜನ್ ವಿತರಣೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next