Advertisement

ಮುರಿದು ಬಿತ್ತು ನಟ ನಾಗಾರ್ಜುನ ಪುತ್ರ ಅಖೀಲ್‌ ವಿವಾಹ

03:50 AM Feb 23, 2017 | Team Udayavani |

ಮುಂಬೈ: ತೆಲುಗು ನಟ ನಾಗಾರ್ಜುನ ಪುತ್ರ, ನಟ ಅಖೀಲ್‌ ಅಕ್ಕಿನೇನಿ ಅವರ ವಿವಾಹ ಮಹೋತ್ಸವ ನಿಶ್ಚಿತಾರ್ಥದ ಬಳಿಕ, ಮದುವೆಗೂ ತಿಂಗಳ ಮುಂಚೆಯೇ ಮುರಿದು ಬಿದ್ದಿದೆ.

Advertisement

ಅಖೀನೇನಿ ಅವರ ವಿವಾಹವು ಉದ್ಯಮಿ ಜಿವಿಕೆ ರೆಡ್ಡಿ ಮೊಮ್ಮಗಳು, ಫ್ಯಾಷನ್‌ ಡಿಸೈನರ್‌ ಶ್ರಿಯಾ ಭೂಪಾಲ್‌ ಅವರೊಂದಿಗೆ ಇಟಲಿಯ ರೋಮ್‌ನಲ್ಲಿ ಬರುವ ಮೇ ನಲ್ಲಿ ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಅವರ ಮದುವೆ ರದ್ದಾಗಿರುವುದಾಗಿ ವರದಿಯಾಗಿದ್ದು, ಕಾರಣಗಳು ತಿಳಿದು ಬಂದಿಲ್ಲ.

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಶ್ರಿಯಾ-ಅಖೀನೇನಿ, 2016ರಲ್ಲಿ ಜಿವಿಕೆ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶ್ರಿಯಾ-ಅಖೀನೇನಿಯ ಮನವೊಲಿಧಿಸಲು ಇಬ್ಬರ ಪೋಷಕರು ಯತ್ನಿಸಿದರಾದರೂ ಪ್ರಯೋಜಧಿನವಾಗಿಲ್ಲ. ಇಟಲಿಯಲ್ಲಿ ಕಾಯ್ದಿರಿಧಿಸಲಾಗಿದ್ದ ಹೋಟೆಲ್‌ಗ‌ಳು, ಎರಡೂ ಕಡೆ ಸಂಬಂಧಿಕರ ವಿಮಾನ ಟಿಕೆಟ್‌ಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next