Advertisement

ಗೋವಾದ ಎಲ್ಲ ಗಣಿ ಗುತ್ತಿಗೆಗಳು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಹರಾಜು : ಸಿಎಂ

02:49 PM Jul 13, 2022 | Team Udayavani |

ಪಣಜಿ: ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯದ ಎಲ್ಲಾ ಗಣಿಗಳು ರಾಜ್ಯ ಸರ್ಕಾರದ ಒಡೆತನದಲ್ಲಿದ್ದು, ಈ ಎಲ್ಲ ಗಣಿ ಗುತ್ತಿಗೆಗಳು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಹರಾಜಾಗಲಿವೆ. ಇದೇ ವೇಳೆ ಕಾರ್ಮಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈಗಿರುವ ಗಣಿ ಕಾರ್ಮಿಕರಿಗೆ ಕೆಲಸದಲ್ಲಿ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

Advertisement

ಗಣಿಗಾರಿಕೆ ವಲಯದ ಶಾಸಕರಾದ ಗಣೇಶ್ ಗಾಂವ್ಕರ್, ಪ್ರೇಮೇಂದ್ರ ಶೇಟ್, ಡಾ.ಚಂದ್ರಕಾಂತ ಶೇಟ್ಯೇ ಅವರು ಗೋವಾ ವಿಧಾನಸಭಾ ಅಧಿವೇಶನ ಕಲಾಪದಲ್ಲಿ  ನೀಡಿದ ಮಹತ್ವದ ಸಲಹೆಯನ್ನು ಕುರಿತು ಸಿಎಂ ಸಾವಂತ್ ಮಾತನಾಡಿದರು. ಪ್ರತಿಪಕ್ಷದ ನಾಯಕ ಮೈಕೆಲ್ ಲೋಬೋ ಮತ್ತು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಅವರು ಕಾರ್ಮಿಕರ ಹಿತಾಸಕ್ತಿಗಳನ್ನು ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಪ್ರಮೋದ ಸಾವಂತ್  ಮಾತನಾಡಿ-ಸದ್ಯ 88 ಗಣಿಗಳ ಕುರಿತು ಚರ್ಚೆ ನಡೆಯುತ್ತಿದೆ. ಈ ಗಣಿಗಳು ತಕ್ಷಣದ ಹರಾಜಿನಲ್ಲಿದ್ದರೂ, 150 ಕ್ಕೂ ಹೆಚ್ಚು ಗಣಿಗಳು ಸರ್ಕಾರಿ ಸ್ವಾಮ್ಯದವುಗಳಾಗಿವೆ. ಇದಕ್ಕಾಗಿ ಕೇಂದ್ರ ಖನಿಜ ಮಂಡಳಿಯ ಸಹಯೋಗದಲ್ಲಿ ಅದರ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ಪರಿಶೀಲಿಸಲಾಗುತ್ತಿದೆ. ಆದರೆ, 88 ಗಣಿಗಳನ್ನು ತಕ್ಷಣವೇ ಹರಾಜು ಮಾಡಲಾಗುವುದು ಮತ್ತು ಇತರ ಗಣಿಗಳನ್ನು ಹಂತ ಹಂತವಾಗಿ ಪರಿಗಣಿಸಲಾಗುವುದು. ಹರಾಜು ಪ್ರಕ್ರಿಯೆಯಲ್ಲಿ ಸಹಾಯಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅನ್ನು ಸಂಪರ್ಕಿಸಲಾಗಿದೆ ಮತ್ತು ಕೇಂದ್ರ ಖನಿಜ ಸಚಿವಾಲಯವು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದರು.

ಕಂಪನಿಗಳಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲ

ಗೋವಾ ವಾಸ್ಕೊ ಮುರಗಾಂವ  ಕ್ಷೇತ್ರದಲ್ಲಿ ಅನೇಕ ದೊಡ್ಡ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿವೆ. ಕಳೆದ ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿರುವ ಈ ಕಂಪನಿಗಳಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಇಲ್ಲಿನ ನಾನಾ ಯೋಜನೆಗಳಿಂದ ಮೋರಗಾಂವ ಜನತೆ ನಾನಾ ಸಂಕಷ್ಟಗಳನ್ನು ಅನುಭವಿಸುವಂತಾಗಿದೆ, ಆದರೆ ಇದರಿಂದ ಇಲ್ಲಿರುವ ಹೊರ ರಾಜ್ಯದ ಜನರು ಲಾಭ ಪಡೆಯುತ್ತಿದ್ದಾರೆ ಎಂದು ಮುರಗಾಂವ  ಕ್ಷೇತ್ರದ ಶಾಸಕ ಸಂಕಲ್ಪ ಅಮೋಣಕರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಗೋವಾ ವಿಧಾನಸಭಾ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು. ಗೋವಾ ಶಿಪ್‌ಯಾರ್ಡ್, ಮೊರ್ಮುಗೋವಾ ಪೋರ್ಟ್ ಟ್ರಸ್ಟ್ ಮುರ್ಗಾಂವ್ ಕ್ಷೇತ್ರದ ಪ್ರಮುಖ ಯೋಜನೆಗಳಾಗಿವೆ. ಇಲ್ಲಿನ ಬಂದರಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಸಾಗಣೆಯಾಗುತ್ತದೆ. ಇದು ದೊಡ್ಡ ಕಂಪನಿಗಳನ್ನು ಒಳಗೊಂಡಿರುತ್ತದೆ. ಆದರೆ ಇಲ್ಲಿನ ಸಿಬ್ಬಂದಿ ಹಾಗೂ ಕಾರ್ಮಿಕರು ಹೊರ ರಾಜ್ಯದವರು. ಇಲ್ಲಿ ನೆಲೆಸಿರುವ ಹೊರ ರಾಜ್ಯದ ಜನರು ಆರ್ಥಿಕ ಲಾಭವನ್ನು ಪಡೆಯುತ್ತಿದ್ದರೆ ಸ್ಥಳೀಯರು ಕಲ್ಲಿದ್ದಲು ಮಾಲಿನ್ಯದ ಸಮಸ್ಯೆಯನ್ನು ಅನುಭವಿಸಬೇಕಾಗಿದೆ ಎಂದು ಅಮೋಣಕರ್ ಆರೋಪಿಸಿದರು.

ಕಳೆದ ಹಲವು ವರ್ಷಗಳಿಂದ ಮೋರಗಾಂವ ಮತಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಬೈನಾ  ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಯಾವುದೇ ಸೌಲಭ್ಯಗಳಿಲ್ಲ. ಸರ್ಕಾರ ಈ ಮೀನುಗಾರ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ. ಈ ಸ್ಥಳದಲ್ಲಿ ಸುಮಾರು ೩೦೦ ರಿಂದ ೩೫೦ ಸಾಂಪ್ರದಾಯಿಕ ಮೀನುಗಾರರು ಇದ್ದಾರೆ. ಕರಾವಳಿ ಕಾನೂನು ಅವರ ವ್ಯಾಪಾರವನ್ನು ನಿರ್ಬಂಧಿಸುತ್ತದೆ ಮತ್ತು ಮಳೆಗಾಲದಲ್ಲಿ ಅವರು ತಮ್ಮ ದೋಣಿಗಳನ್ನು ಬೇರೆಡೆಗೆ ಸಾಗಿಸಬೇಕಾಗುತ್ತದೆ. ಯಾವುದೇ ಸೌಲಭ್ಯವಿಲ್ಲ ಎಂದು ಅಮೋಣಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next