Advertisement

ಎಲ್ಲ ರೈತರ ಸಾಲಮನ್ನಾ ಖಚಿತ

06:02 AM Jan 14, 2019 | |

ಗುಳೇದಗುಡ್ಡ: ಸಮ್ಮಿಶ್ರ ಸರಕಾರದಲ್ಲಿ ಎಲ್ಲ ರೈತರ ಸಾಲ ಮನ್ನಾ ಮಾಡುವ ಹಂತದಲ್ಲಿದ್ದೇವೆ. ಕಾರಣ ಯಾವ ರೈತರೂ ಆತಂಕ ಪಡುವಂತಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

Advertisement

ಇಲ್ಲಿಯ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕುಗಳಲ್ಲಿಯ ರೈತರ ಸುಮಾರು 45 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದ್ದು, ರಾಜ್ಯ ದೇಶದಲ್ಲೇ ಮಾದರಿಯಾಗಿದೆ. ದೇಶದಲ್ಲಿ ಎಲ್ಲ ರಾಜ್ಯಗಳು ಕರ್ನಾಟಕವನ್ನು ಮಾದರಿಯನ್ನಾಗಿ ಇಟ್ಟುಕೊಂಡು ಸಾಲಮನ್ನಾ ಮಾಡಲು ಮುಂದೆ ಬರುತ್ತಿವೆ ಎಂದರು.

ರಾಜ್ಯದಲ್ಲಿ 1,69,534 ರೈತರಿಗೆ ಒಟ್ಟು ರೂ 963ಕೋಟಿ ಸಾಲಮನ್ನಾ ಆಗಿದೆ. ಇನ್ನೂ ಮಾಡಲಾಗುತ್ತಿದೆ. ನವೆಂಬರ್‌ ತಿಂಗಳ ಸಾಲದ ಹಣ ಬಿಡುಗಡೆ ಮಾಡಿದ್ದೇವೆ. ಡಿಸೆಂಬರ್‌ ತಿಂಗಳಲ್ಲಿನ ಸಾಲದ ಹಣ ಬಿಡುಗಡೆ ಮಾಡುತ್ತೇವೆ. ಜನವರಿ ಹಾಗೂ ಮುಂದಿನ ತಿಂಗಳಲ್ಲೂ ಸಾಲ ಮನ್ನಾದ ಹಣ ಬಿಡುಗಡೆ ಮಾಡುತ್ತೇವೆ. ಬ್ಯಾಂಕುಗಳು ಸಾಲಕ್ಕೆ ಒತ್ತಾಯಿಸದಂತೆ ನಿರ್ದೇಶನ ಮಾಡಿದ್ದೇವೆ. ರಾಜ್ಯದಲ್ಲಿ ಸುಮಾರು 18ಲಕ್ಷ ರೈತರ ಮಾಹಿತಿಯನ್ನು ನಾವು ಸಂಗ್ರಹಿಸಿದ್ದು, ಇನ್ನೂ ಹಂತ ಹಂತವಾಗಿ ರೈತರ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸರಕಾರ ರೈತರ ಪರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next