Advertisement

ಎಲ್ಲ ದೇಶಗಳು ನಮ್ಮೊಂದಿಗಿವೆ: ಸುಷ್ಮಾ ಸ್ವರಾಜ್‌

05:10 AM Jul 21, 2017 | |

ನವದೆಹಲಿ: ಸಿಕ್ಕಿಂನಲ್ಲಿ ಚೀನಾ ಸೇನೆಯು ಗುಟುರು ಹಾಕುತ್ತಿರುವ ನಡುವೆಯೇ, “ಡೋಕ್ಲಾಂ ಗಡಿ ವಿಚಾರದಲ್ಲಿ ಎಲ್ಲ
ದೇಶಗಳು ನಮ್ಮೊಂದಿಗಿವೆ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

Advertisement

ಗುರುವಾರ ರಾಜ್ಯಸಭೆಯಲ್ಲಿ ಮಾತನಾಡುತ್ತಾ, “ಎರಡೂ ದೇಶಗಳು ಸೇನೆ ಹಿಂತೆಗೆದು ಮಾತುಕತೆಗೆ
ತೊಡಗಿಸಿಕೊಳ್ಳಬೇಕು. ಭಾರತ ತನ್ನ ಸೇನೆಯನ್ನು ನಿಲ್ಲಿಸಿದ್ದು, ತನ್ನ ಭದ್ರತೆಯ ಕುರಿತ ಕಾಳಜಿಯಿಂದ’ ಎಂದು ಹೇಳಿದ್ದಾರೆ.

ಅಲ್ಲದೆ ಮಾತುಕತೆ ವಿಚಾರದಲ್ಲಿ ನಾವು ರಾಜತಾಂತ್ರಿಕ ವಲಯವನ್ನು ಮುಕ್ತವಾಗಿರಿಸಿದ್ದೇವೆ ಎಂದಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುತ್ತಿಲ್ಲ: ಪ್ರಶ್ನೋತ್ತರ ಅವಧಿಯಲ್ಲೂ ಪ್ರತಿಕ್ರಿಯಿಸಿದ ಸಚಿವೆ ಸುಷ್ಮಾ, “2012ರಲ್ಲಿ ಭೂತಾನ್‌, ಚೀನಾ,
ಭಾರತದ ಒಪ್ಪಂದದಂತೆ ಮೂರೂ ದೇಶಗಳ ಗಡಿ ಸೇರುವ ಟ್ರೈಜಂಕ್ಷನ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಆದರೆ ಭಾರೀ ಯಂತ್ರಗಳನ್ನು ತಂದು ರಸ್ತೆ ನಿರ್ಮಿಸುವ ಮೂಲಕ ಚೀನಾ ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next