Advertisement

ಗೋ ಸಂರಕ್ಷಣೆಗೆ ಸಕಲ ಸಹಕಾರ

11:27 AM May 04, 2018 | |

ಸಾಗರ: ಗೋ ಸಂರಕ್ಷಣೆಯ ಮಹಾ ಪುಣ್ಯ ಕಾರ್ಯದಲ್ಲಿ ಪೂರ್ಣ ತೊಡಗಿಕೊಂಡ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮಿಂದ ಸಕಲ ಸಹಕಾರ ಸದಾ ಇದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.

Advertisement

ನಗರದ ರಾಘವೇಶ್ವರ ಸಭಾ ಭವನದಲ್ಲಿ ಗುರುವಾರ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಭೇಟಿಯಾದ ಅವರು ಅರ್ಧ ಗಂಟೆಯ ಸಮಯ ಗೋ ಹತ್ಯೆ ನಿಷೇಧ, ಗೋ ಸಂರಕ್ಷಣೆ ಹಾಗೂ ಭಾನ್ಕುಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಠದ ಸಹಸ್ರ ಗೋವುಗಳ ಗೋಸ್ವರ್ಗದ ಕುರಿತು ಪರಸ್ಪರ ಅಭಿಪ್ರಾಯ ಹಂಚಿಕೊಂಡರು.

ಕರ್ನಾಟಕದಲ್ಲಿ ಇಂತಹ ಕ್ಲಿಷ್ಟ ಕಾಲಘಟ್ಟದಲ್ಲಿಯೂ ಗೋ ಸಂರಕ್ಷಣೆಯ ಹಲವು ಅಭಿಯಾನ, ಅಭಯಾಕ್ಷರ, ಜಾಗೃತಿ ಕೆಲಸಗಳನ್ನು ಇಲ್ಲಿಯ ಗ್ರಾಮದಿಂದಲೇ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಗೋ ರಕ್ಷಣೆ ಎನ್ನುವುದು ಮನುಕುಲದ ರಕ್ಷಣೆಯೂ ಹೌದು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂತಹ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಇದೇ ವೇಳೆ ರಾಘವೇಶ್ವರ ಶ್ರೀಗಳು ಮೇ 27ರ ಭಾನ್ಕುಳಿ ಗೋ ಸ್ವರ್ಗ ಉದ್ಘಾಟನೆ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿ, ಅಲ್ಲಿಯ ಯೋಜನೆಯ ಪೂರ್ಣ ಪಾಠವನ್ನು ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next