Advertisement

ಆಪ್ತ ಅಂದರೆ ಏನ್ರೀ ..ಎಲ್ಲರೂ ನಮ್ಮವರೇ : ಸಿದ್ದರಾಮಯ್ಯ

10:07 AM Jul 08, 2019 | Vishnu Das |

ಬೆಂಗಳೂರು: ಆಪ್ತ ಅಂದರೆ ಏನ್ರೀ..ಎಲ್ಲರೂ ನಮ್ಮವರೇ …ಇದು ಮಾಜಿ ಮುಖ್ಯಮಂತ್ರಿ , ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರಶ್ನಿಸಿದ ಪರಿ.

Advertisement

ಭಾನುವಾರ ಮಾಧ್ಯಮ ಪ್ರತಿನಿಧಿಗಳು , ನಿಮ್ಮ ಆಪ್ತರೇ ರಾಜೀನಾಮೆ ನೀಡಿದ್ದಾರಲ್ಲ ಎಂದು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಎಸ್‌ನವರು ಬಿಟ್ಟು ಬಾಕಿ ಎಲ್ಲರೂ ನಮ್ಮೊಂದಿಗೆ ಇದ್ದವರು . 9 ಜನ ಹೋಗಿದ್ದಾರಲ್ಲ ಅವರೆಲ್ಲರೂ ನಮ್ಮವರೇ.ರೈಟ್‌ ಹ್ಯಾಂಡೂ ಇಲ್ಲ ಲೆಫ್ಟ್ ಹ್ಯಾಂಡೂ ಇಲ್ಲ ಎಂದರು.

ಕುರ್ಚಿ ಖಾಲಿ ಇಲ್ಲ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ಕೆಲವರಿಗೆ ಸಚಿವ ಸ್ಥಾದ ಸಿಗದ ಬೇಸರವಿತ್ತು. ಬಿಜೆಪಿಯವರೆ ಅಸಮಧಾನವನ್ನು ಬಳಿಸಿಕೊಂಡು ಈ ಪ್ರಯತ್ನ ನಡೆಸಿದ್ದಾರೆ ಎಂದು ಕಿಡಿ ಕಾರಿದರು.

Advertisement

ನಾನು ಮುಖ್ಯಮಂತ್ರಿಯಾದರೆ ರಾಜೀನಾಮೆ ವಾಪಾಸ್‌ ಪಡೆಯುವುದಾಗಿ ಯಾರೂ ನನಗೆ ಹೇಳಿಲ್ಲ. ನಿಮಗೆ ಯಾರಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next