Advertisement

ಚೀನಾ ವಿರುದ್ಧ ಕರವೇ ಪ್ರತಿಭಟನೆ

11:49 AM Jun 27, 2020 | Naveen |

ಆಳಂದ: ಚೀನಾ ಉತ್ಪನ್ನ ನಿಷೇಧಿಸುವಂತೆ ಹಾಗೂ ಭಾರತೀಯ ಸೈನಿಕರ ಮೇಲೆ ನಡೆದ ದಾಳಿ ಖಂಡಿಸಿ ನಿಂಬರಗಾ ನಾಡ ತಹಸೀಲ್‌ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಬುಧವಾರ ಕರವೇ ನಿಂಬರಗಾ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಕಾರ್ಯಕರ್ತರು, ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದು ಖಂಡನೀಯವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸಮರ್ಪಕ ಪತ್ಯುತ್ತರ ನೀಡಬೇಕು ಎಂದು ಆಗ್ರಹಿಸಿದರು. ನಾಡ ತಹಶೀಲ್ದಾರ್‌ ಆರ್‌. ಮಹೇಶ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಹಾದೇವ ಮಿಟಕಾರ, ಸಚಿನಕುಮಾರ ಶೀಲವಂತರ, ಕ್ಷೇಮಲಿಂಗ ಕಂಬಾರ, ಅಂಬರೀಷ ತೆಗ್ಗಳ್ಳಿ, ಅನಿಲ ನಾಗೂರ, ಸೋನಬಾ ಪಾಚಂಗೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next