Advertisement

ಜೆಹಾದ್‌ಗೆ ಸೇರಲು ಭಾರತೀಯ ಮುಸ್ಲಿಮರಿಗೆ ಅಲ್‌ ಕಾಯಿದಾ ಕರೆ

06:05 AM Dec 07, 2017 | Harsha Rao |

ಶ್ರೀನಗರ: ದೇಶದಲ್ಲಿ ಭೀತಿವಾದ ಹರಡಲು ಅವಕಾಶಗಳನ್ನು ಹುಡುಕುತ್ತಿರುವ ಉಗ್ರ ಸಂಘಟನೆಗಳು ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ ತುಂಬಿರುವುದನ್ನು ಮುಂದಿಟ್ಟು ಭಾರತೀಯ ಮುಸ್ಲಿಮರನ್ನು ರೊಚ್ಚಿಗೆಬ್ಬಿಸಲು ಯತ್ನಿಸುತ್ತಿವೆ. ಅಲ್‌ಕಾಯಿದಾ ಸಂಘಟನೆಯ ಅಂಗವಾದ ಕಾಶ್ಮೀರ ಮೂಲದ ಅನ್ಸರ್‌ ಘಜ್ವತುಲ್‌ ಹಿಂದ್‌ ಸಂಘಟನೆಯು ಭಾರತೀಯ ಮುಸ್ಲಿಮರಿಗೆ ಜೆಹಾದ್‌ ಸೇರಲು ಆಗ್ರಹಿಸಿದೆ. ಬಾಬರಿ ಮಸೀದಿ ನಾಶವನ್ನು ಸಂಪೂರ್ಣ ಮುಸ್ಲಿಮರ ನಾಶವೆಂದೇ ಅರ್ಥೈಸಿರುವ ಸಂಘಟನೆ, ಹಿಂದೂಗಳ ವಿರುದ್ಧ ಹರಿಹಾಯ್ದಿದೆ.

Advertisement

ಈ ಕುರಿತು ಅಲ್‌ ಕಾಯಿದಾ ಮುಖಂಡ ಎನ್ನಲಾದ ಸುಲ್ತಾನ್‌ ಝಬುಲ್‌ ಹಿಂದಿಯಲ್ಲಿ ಸಂದೇಶವನ್ನೂ ನೀಡಿದ್ದಾನೆ. ಭಾಷೆ ಉಚ್ಚರಣೆಯಿಂದ ಈತ ಕಾಶ್ಮೀರ ಮೂಲದ ವ್ಯಕ್ತಿ ಅಲ್ಲ ಎಂಬುದು ತಿಳಿಯುತ್ತದೆ.

ಇದು ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಲಷ್ಕರ್‌-ಎ-ತಯ್ಯಬಾ ಸಂಘಟನೆಗಳಿಂದ ವಿಮುಖವಾಗಿ ಅಲ್‌ ಕಾಯಿದಾ ಸೇರಿದವರು ಹೊಸದಾಗಿ ಸೃಷ್ಟಿಸಿ ಕೊಂಡಿರುವ ಸಂಘಟನೆಯಾಗಿದ್ದು, ಝಾಕೀರ್‌ ಭಟ್‌ ಅಲಿಯಾಸ್‌ ಝಾಕೀರ್‌ ಮೂಸಾ ಇದರ ನಾಯಕ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next