Advertisement

ಅಕ್ಷಯ ತೃತೀಯಾ: 45 ಕೋಟಿ ರೂಪಾಯಿ ವ್ಯವಹಾರ

12:40 AM Apr 27, 2020 | Sriram |

ಬೆಂಗಳೂರು: ಅಕ್ಷಯ ತೃತೀಯಾ ದಿನವಾದ ರವಿವಾರ ರಾಜ್ಯಾದ್ಯಂತ ಸುಮಾರು 45 ಕೋ.ರೂ. ವಹಿವಾಟು ನಡೆದಿದೆ. ಪ್ರತಿ ವರ್ಷದ ಅಕ್ಷಯ ತೃತೀಯಾ ದಿನದ ವ್ಯವಹಾರಕ್ಕೆ ಹೋಲಿಸಿದರೆ ಈ ಬಾರಿ ಕೇವಲ ಶೇ.3ರಷ್ಟು ಮಾತ್ರ ವಹಿವಾಟು ನಡೆದಿದೆ ಎಂದು ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.

Advertisement

ಕೋವಿಡ್- 19 ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಆಗಿರುವ ನಷ್ಟವನ್ನು ಭರಿಸಲು ಲಾಕ್‌ಡೌನ್‌ ಮುಗಿದ ಅನಂತರ ರಾಜ್ಯಾದ್ಯಂತ “ಆಭರಣ ಜಾತ್ರೆ’ ಮಾಡುವ ಚಿಂತನೆ ಮಾಡಲಾಗಿದೆ. ಹಾಗೆಯೇ ಆಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರಿಗೆ ಸಿಹಿಯೊಂದಿಗೆ ಆಭರಣಗಳನ್ನು ಮನೆಗೆ ತಲುಪಿಸಲಾಯಿತು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ| ಬಿ. ರಾಮಾಚಾರಿ ತಿಳಿಸಿದರು.

ರವಿವಾರ ರಾಜ್ಯಾದ್ಯಂತ ಸುಮಾರು 100 ಕೆ.ಜಿ. ಚಿನ್ನ, 100 ಕೆ.ಜಿ. ಬೆಳ್ಳಿ ಮಾರಾಟವಾಗಿದ್ದು 45 ಕೋ.ರೂ.ಗಳಿಗೂ ಅಧಿಕ ವಹಿವಾಟು ನಡೆಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next