Advertisement

ಅಕ್ಷಯ ತೃತೀಯ: ಚಿನ್ನ ಖರೀದಿ ಜೋರು

12:42 AM May 07, 2019 | Team Udayavani |

ಬೆಂಗಳೂರು: ಅಕ್ಷಯ ತೃತೀಯದ ವಿಶೇಷವಾಗಿ ನಗರದ ಚಿನ್ನದ ಅಂಗಡಿಗಳ ಕಡೆಗೆ ಗ್ರಾಹಕರು ಹೆಜ್ಜೆ ಹಾಕಿದ್ದಾರೆ. ಮಂಗಳವಾರ ಬೆಳಗ್ಗೆ 3.17ಕ್ಕೆ ಪ್ರಾರಂಭವಾಗುವ ಅಕ್ಷಯ ತೃತೀಯ, ಬುಧುವಾರ ಮಧ್ಯಾಹ್ನ 2.17ಕ್ಕೆ ಮುಕ್ತಾಯವಾಗಲಿದೆ.

Advertisement

ಹಿಂದೂ ಸಂಪ್ರದಾಯದ ಪ್ರಕಾರ ಈ ಸಮಯದಲ್ಲಿ ಚಿನ್ನ ಖರೀದಿಸುವುದರಿಂದ ಶುಭ ಎಂದು ಭಾವಿಸಲಾಗಿದೆ. ಕಾರಣ, ಕನಿಷ್ಠ ಒಂದು ಗ್ರಾಂ. ಚಿನ್ನವನ್ನಾದರೂ ಸಾರ್ವಜನಿಕರು ಖರೀದಿಸುತ್ತಾರೆ.

ಇದೇ ವೇಳೆ ಹಲವು ಚಿನ್ನದ ಅಂಗಡಿಗಳು ರಿಯಾಯತಿ ಘೋಷಿಸಿವೆ. ಅಕ್ಷಯ ತೃತೀಯದ ಮುನ್ನಾ° ದಿನವಾದ ಸೋಮವಾರವೂ ಚಿನ್ನ, ಬೆಳ್ಳಿ ಖರೀದಿ, ಮುಂಗಡ ಕಾಯ್ದಿರಿಸುವಿಕೆ ನಗರದಲ್ಲಿ ಭರ್ಜರಿಯಾಗಿತ್ತು. ಕೆಲವರು ಚಿನ್ನ ಖರೀದಿಸಲಿದ್ದು, ಇನ್ನೂ ಕೆಲವರು ಉಡುಗೋರೆಯಾಗಿ ನೀಡುವುದಕ್ಕೆ ಮುಂದಾಗಿದ್ದಾರೆ.

ಈ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭ ಸಂಕೇತ ಎಂದು ನಂಬಲಾಗಿದೆ. ಚಿನ್ನದ ಮಳಿಗೆಗಳೂ ಭಿನ್ನವಾದ ಡಿಸೈನ್‌ನ ಚಿನ್ನದ ಆಭರಣಗಳನ್ನು ಪರಿಚಯಿಸಿದ್ದು, ಹೊಸ ಮಾದರಿಯ ಚಿನ್ನದ ಆಭರಣಗಳಿಗೆ ಜನ ಫಿದಾ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next