Advertisement

ಏಶ್ಯಾಡ್‌ ತಂಡಕ್ಕೆ ಅಕ್ಷಯ್‌ ಶುಭ ಹಾರೈಕೆ

11:40 AM Jul 29, 2018 | |

ಮುಂಬಯಿ: ಜಕಾರ್ತಾ ಏಶ್ಯನ್‌ ಗೇಮ್ಸ್‌ಗೆ ಹೊರಟು ನಿಂತ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಶುಭ ಹಾರೈಸಿದ್ದಾರೆ. ಪದಕಗಳನ್ನು ಬಾಚಿಕೊಂಡು ಬಂದು ಭಾರತವನ್ನು ಹೆಮ್ಮೆಪಡುವಂತೆ ಮಾಡಿ ಎಂದಿದ್ದಾರೆ.
ಶನಿವಾರ ತಂಡದ ಪ್ರಾಯೋಜಕ ಸಂಸ್ಥೆ  “ಎಡೆಲ್ವಿàಸ್‌ ಫೈನಾನ್ಶಿಯಲ್‌ ಕಂಪೆನಿ’ ಆಯೋಜಿಸಿದ “ಟೀಮ್‌ ಇಂಡಿಯಾ ಘರ್‌ ಲಾಯೆಂಗೇ ಗೋಲ್ಡ್‌’ ಸಮಾರಂಭದಲ್ಲಿ ಅಕ್ಷಯ್‌ ಕುಮಾರ್‌ ಮುಖ್ಯ ಅತಿಥಿಯಾಗಿದ್ದರು. 

Advertisement

ಜಿಮ್ನಾಸ್ಟಿಕ್‌ ತಾರೆ ದೀಪಾ ಕರ್ಮಾಕರ್‌, ಶೂಟರ್‌ ಹೀನಾ ಸಿಧು ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು. ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಉಪಸ್ಥಿತರಿದ್ದರು. ಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ತಲಾ 50 ಲಕ್ಷ ರೂ.ಗಳ ಉಚಿತ ವಿಮೆಯನ್ನು ಘೋಷಿಸಿತು. ಈ ಸಂದರ್ಭದಲ್ಲಿ ಮಾತಾಡಿದ ಶೂಟರ್‌ ಹೀನಾ ಸಿಧು, “ನಮ್ಮೆಲ್ಲರ ಪಾಲಿಗೆ ಪದಕ ಗೆಲ್ಲಲು ಹಾಗೂ ವಿಶ್ವ ಮಟ್ಟದಲ್ಲಿ ಸಾಧನೆಗೈಯಲು ಎದುರಾಗಿರುವ ಮತ್ತೂಂದು ಅವಕಾಶ. ಇದನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಬಂಗಾರದೊಂದಿಗೆ ಭಾರತಕ್ಕೆ ಮರಳಬೇಕು’ ಎಂದರು. ಕಾರ್ಯಕ್ರಮದ ಬಳಿಕ ಅಕ್ಷಯ್‌ ಕುಮಾರ್‌ ಕ್ರೀಡಾಪಟು ಗಳೊಂದಿಗೆ ಬೆರೆತು ಸೆಲ್ಫಿ ಕ್ಲಿಕ್ಕಿಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next