Advertisement

ಜಡೇಜ ಬದಲಿಗೆ ಅಕ್ಷರ್‌ ಪಟೇಲ್‌

12:08 PM Aug 10, 2017 | Team Udayavani |

ಕೊಲಂಬೊ: ಕ್ಯಾಂಡಿಯಲ್ಲಿ ಆ. 12ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್‌ಗೆ 15 ಸದಸ್ಯರ ಭಾರತೀಯ ತಂಡದಲ್ಲಿ ಒಂದು ಪಂದ್ಯಕ್ಕೆ ನಿಷೇಧಗೊಂಡಿರುವ ರವೀಂದ್ರ ಜಡೇ ಅವರ ಬದಲಿಗೆ ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಅವರನ್ನು ಹೆಸರಿಸಲಾಗಿದೆ.

Advertisement

ಮೂರನೇ ಟೆಸ್ಟ್‌ಗೆ ಜಡೇಜ ಬದಲಿಗೆ ಅಕ್ಷರ್‌ ಪಟೇಲ್‌ ಅವರನ್ನು ಆಯ್ಕೆ ಸಮಿತಿ ಹೆಸರಿಸಿದೆ ಎಂದು ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಬ್‌ ಚೌಧರಿ ಹೇಳಿದ್ದಾರೆ.  ಅಕ್ಷರ್‌ ಪಟೇಲ್‌ ಭಾರತ “ಎ’ ತಂಡದ ಸದಸ್ಯರಾಗಿದ್ದರು. ಭಾರತ “ಎ’ ತಂಡ ಮಂಗಳವಾರ ರಾತ್ರಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ “ಎ’ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ನಾಲ್ಕು ವರ್ಷಗಳ ಹಿಂದೆ ಗೆದ್ದ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಂಡಿತ್ತು.

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ರವೀಂದ್ರ ಜಡೇಜ ಅವರನ್ನು ಮೂರನೇ ಟೆಸ್ಟ್‌ಗೆ ನಿಷೇಧ ಹೇರಲಾಗಿತ್ತು. 24 ತಿಂಗಳ ಅವಧಿಯಲ್ಲಿ ಆರು ದೋಷ ಅಂಕ ಪಡೆದ ಕಾರಣಕ್ಕಾಗಿ ಐಸಿಸಿ ಒಂದು ಪಂದ್ಯ ನಿಷೇಧದ ಶಿಕ್ಷೆ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next