Advertisement

ನಿರ್ಮಲಾ ಸೀತಾರಾಮನ್‌ಗೆ ಅಕ್ಕ ನಾಗಲಾಂಬಿಕೆ ಪುರಸ್ಕಾರ

01:09 AM Feb 15, 2019 | |

ಬೀದರ್‌: ಲಿಂಗಾಯತ ಮಹಾಮಠ ಬಸವ ಸೇವಾ ಪ್ರತಿಷ್ಠಾನದಿಂದ ಫೆ.17ರಿಂದ ಪ್ರಾರಂಭವಾಗುವ “ವಚನ ವಿಜಯೋತ್ಸವ-2019′ ಸಮಾರಂಭದಲ್ಲಿ ನಾಲ್ಕು ಜನ ಗಣ್ಯರಿಗೆ ವಿವಿಧ ಪುರಸ್ಕಾರ ಮಾಡಲಾಗುವುದೆಂದು ಅಕ್ಕ ಅನ್ನಪೂರ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವೀರಮಾತೆ ಅಕ್ಕ ನಾಗಲಾಂಬಿಕೆ ಪುರಸ್ಕಾರ, ಯುವ ವಿಜ್ಞಾನಿ ಎನ್‌.ಎಂ. ಪ್ರತಾಪ ಮಳವಳ್ಳಿ ಅವರಿಗೆ ಚಿನ್ಮಯ ಜ್ಞಾನಿ ಚನ್ನಬಸವಣ್ಣ ಪ್ರತಿಭಾ ಪುರಸ್ಕಾರ, ಅಭಿನೇತ್ರಿ ತಾರಾ (ಅನುರಾಧಾ) ಅವರಿಗೆ ಅಕ್ಕ ನಾಗಲಾಂಬಿಕೆ ಪುರಸ್ಕಾರ ಹಾಗೂ ಹೈಕೋರ್ಟ್‌ ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನದಾಸ ಅವರಿಗೆ ಫೆ.17 ರಂದು ಗುರುಬಸವ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next