Advertisement

ಐಎಸ್‌ಐ ನಂಟಿನ ಅಖಿಲೇಶ್ ಮತಾಂತರಕ್ಕೂ ಸಿದ್ಧ: ಸಚಿವ ಶುಕ್ಲಾ ಆರೋಪ

05:23 PM Nov 03, 2021 | Team Udayavani |

ಲಕ್ನೋ : ‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪಾಕಿಸ್ಥಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಪ್ರೋತ್ಸಾಹವನ್ನು ಹೊಂದಿದ್ದು, ಅವರು ಮುಸ್ಲಿಮರನ್ನು ಓಲೈಸಲು ಮತಾಂತರಕ್ಕೂ ಸಿದ್ಧರಿದ್ದಾರೆ’ ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಮಂಗಳವಾರ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡುತ್ತಾ , ‘ಅಖಿಲೇಶ್ ಅವರು ನೆರೆಯ ದೇಶದ ಐಎಸ್‌ಐಯಿಂದ ಆರ್ಥಿಕ ಬೆಂಬಲವನ್ನು ಸಹ ಪಡೆಯುತ್ತಿರಬಹುದು’ ಎಂದರು.

‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಸ್ಲಾಮಿಕ್ ಜಗತ್ತಿಗೆ ಸವಾಲಾಗಿ ಪರಿಣಮಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಇಸ್ಲಾಮಿಕ್ ಜಗತ್ತಿನ ಪ್ರೋತ್ಸಾಹ,ಸಲಹೆ ಮತ್ತು ಎಲ್ಲ ಬೆಂಬಲವೂ ಸಿಗುತ್ತಿದೆ’ ಎಂದು ಆರೋಪಿಸಿದರು.

‘ಪಾಕಿಸ್ಥಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ’ ಎಂದು ಅಖಿಲೇಶ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next