Advertisement

ಅಖಂಡ ಬಳ್ಳಾರಿ ಜಿಲ್ಲೆ, ವಿರೂಪಾಕ್ಷನ ದರ್ಶನ-ತುಂಗಭದ್ರಾ ತಟದಲ್ಲಿ ಜನಾರ್ದನರೆಡ್ಡಿ ಪ್ರಾರ್ಥನೆ

04:06 PM Nov 06, 2023 | Team Udayavani |

ಗಂಗಾವತಿ:ಮೊದಲಿನಂತೆ ಬಳ್ಳಾರಿ ಅಖಂಡ ಜಿಲ್ಲೆ ಹಾಗೂ ಕಾನೂನು ಸಮಸ್ಯೆಗಳು ಬೇಗ ಇತ್ಯಾರ್ಥವಾಗಿ ಬೇಗನೆ ಹಂಪಿ ವಿರೂಪಾಕ್ಷನವಾಗಲೆಂದು ಪ್ರಾರ್ಥಿಸಿ ತಾಲೂಕಿನ ವಿರೂಪಾಪೂರಗಡ್ಡಿಯ ತುಂಗಭದ್ರಾ ನದಿಯ ತಟದಲ್ಲಿ ಕುಳಿತು ಪ್ರಾರ್ಥಿಸಿದ ಪೊಟೊ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ʻತನ್ನ ಪ್ರಾರ್ಥನೆ ಕುರಿತು ಬರೆದುಕೊಂಡಿದ್ದು ಅಖಂಡ ಬಳ್ಳಾರಿ ಜಿಲ್ಲೆಯ ಭಾಗವಾಗಿರುವ, ನನಗೆ ಅತ್ಯಂತ ಪ್ರೀತಿ ಪಾತ್ರವಾದ ವಿಶ್ವ ವಿಖ್ಯಾತ ಹಂಪಿಗೆ ನಿರ್ಬಂಧವಿರುವ ಕಾರಣ ನಿನ್ನೆ ನನ್ನ ಮತಕ್ಷೇತ್ರವಾದ ಗಂಗಾವತಿ ಆನೆಗೊಂದಿ, ವಿರೂಪಾಪೂರಗಡ್ಡಿಯ ಪ್ರಕೃತಿಯ ಮಡಿಲಲ್ಲಿ ಹರಿಯುವ ತುಂಗಭದ್ರ ನದಿ ತೀರದ ಕಲ್ಲು ಬಂಡೆಯ ಮೇಲೆ ಕೂತು ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯನ್ನು ನನ್ನ ಕ್ಷೇತ್ರ, ನಾಡು ಹಾಗೂ ದೇಶದ ಒಳಿತಿಗಾಗಿ ಪ್ರಾರ್ಥಿಸಿ, ಶೀಘ್ರವೇ ನನ್ನೆಲ್ಲಾ ಕಷ್ಟಗಳನ್ನು ಪರಿಹರಿಸಿ ನನ್ನ ತವರು ಜಿಲ್ಲೆಯಾದ ಬಳ್ಳಾರಿಗೆ ಮತ್ತೆ ಪಾದಾರ್ಪಣೆ ಮಾಡಲು ಆಶೀರ್ವದಿಸಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿದೆ ಎಂದಿದ್ದಾರೆ.

ಇದನ್ನೂ ಓದಿ: Politics; ಒಳ್ಳೆಯ ಕೆಲಸ ಮಾಡುವುದಾದರೆ ಎಲ್ಲಾ ಎಂಎಲ್ಎಗಳನ್ನು ಕಳುಹಿಸುತ್ತೇನೆ: ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next