Advertisement

ಸ್ವಗ್ರಾಮದಲ್ಲಿ ಎ.ಕೆ.ಸುಬ್ಬಯ್ಯ ಅಂತ್ಯಕ್ರಿಯೆ

10:53 PM Aug 28, 2019 | Team Udayavani |

ಮಡಿಕೇರಿ: ಮಂಗಳವಾರ ನಿಧನರಾದ ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹುದಿಕೇರಿಯಲ್ಲಿನ ಕಲ್ಲುಗುಂಡಿ ಎಸ್ಟೇಟ್‌ನಲ್ಲಿ ಬುಧವಾರ ನೆರವೇರಿತು. ಇದಕ್ಕೂ ಮೊದಲು ಸುಬ್ಬಯ್ಯನವರ ಪಾರ್ಥಿವ ಶರೀರವನ್ನು ಬೆಳ್ಳೂರು ನಿವಾಸದಲ್ಲಿ ಇರಿಸಲಾಯಿತು. ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್‌, ವಿಧಾನಸಭೆಯ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಅನರ್ಹ ಶಾಸಕ ಹೆಚ್‌.ವಿಶ್ವನಾಥ್‌, ಮಾಜಿ ಸಚಿವ ಯು.ಟಿ.ಖಾದರ್‌ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Advertisement

ಬಳಿಕ, ಕಲ್ಲುಗುಂಡಿ ಎಸ್ಟೇಟ್‌ನಲ್ಲಿ ಅವರ ಪತ್ನಿ ಡಾಟಿ ಅವರ ಸಮಾಧಿ ಸ್ಥಳದ ಬಳಿಯೇ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಹಿರಿಯ ಪುತ್ರ ನರೇನ್‌ ಕಾರ್ಯಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಸಂದರ್ಭ ಸಾಮಾಜಿಕ ಹೋರಾಟಗಾರರು, “ಕಟ್ಟುವೆವು ನಾವು ಕಟ್ಟುವೆವು …. ಹೊಸ ನಾಡೊಂದನ್ನು ಕಟ್ಟುವೆವು’ ಎಂಬ ಕ್ರಾಂತಿಗೀತೆ ಹಾಡುವ ಮೂಲಕ ಎ.ಕೆ.ಸುಬ್ಬಯ್ಯ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next