Advertisement

‘ರೈಮ್ಸ್’‌ ಮೇಲೆ ಅಜಿತ್‌ ಜಯರಾಜ್‌ ಕನಸು

11:20 AM Mar 05, 2021 | Team Udayavani |

ನಟ ಅಜಿತ್‌ ಜಯರಾಜ್‌ “ರೈಮ್ಸ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಬಿ.ಅಶೋಕ್‌ ಕುಮಾರ್‌ ಚಿತ್ರದ ಪೋಸ್ಟರ್‌ ರಿಲೀಸ್‌ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Advertisement

ಈ ಚಿತ್ರಕ್ಕೆ ಅಜಿತ್‌ ಕುಮಾರ್‌ ಜೆ. ನಿರ್ದೇಶಕರು. ಅವರಿಗೆ ಇದು ಮೊದಲ ಸಿನಿಮಾ. ಇವರ ಕಥೆ ನಂಬಿ ಜ್ಞಾನಶೇಖರ್‌ ಹಾಗೂ ರಮೇಶ್‌ ಆರ್ಯ ನಿರ್ಮಾಣ ಮಾಡಲು ಮುಂದಾಗಿ ದ್ದಾರೆ. ಸುಷ್ಮಾ ನಾಯರ್‌ ನಾಯಕಿ. “ಒಂದು ಕೊಲೆಯ ತನಿಖೆ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ.

ಇದನ್ನೂ ಓದಿ:ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್‌ ಬಿಚ್ಚಿಟ್ಟರು ರಾಬರ್ಟ್‌ ಸೀಕ್ರೇಟ್‌!

ಇಲ್ಲಿ ಸಾಂಗ್ಸ್‌ ಇಲ್ಲ, ಫೈಟ್ಸ್‌ ಕೂಡ ಇಲ್ಲ. ಹಾಗಂತ, ಕಲಾತ್ಮಕ ಸಿನಿಮಾ ಅಲ್ಲ, ನೋಡುಗರಿಗೆ ಕುತೂಹಲ ಕೆರಳಿಸುವ ಅಂಶಗಳು ಇಲ್ಲಿವೆ. “ರೈಮ್ಸ್‌’ ಶೀರ್ಷಿಕೆ ಯಾಕೆ ಎಂಬುದಕ್ಕೆ ಸಿನಿಮಾ ನೋಡಿದಾಗ ಗೊತ್ತಾಗುತ್ತೆ’ ಎಂದು ವಿವರ ಕೊಟ್ಟರು ನಿರ್ದೇಶಕ ಅಜಿತ್‌. ಈಗಾಗಲೇ ನಾಯಕ ಅಜಿತ್‌ ಜಯ ರಾಜ್‌ ಅವರಿಗೆ ಇಲ್ಲಿ ತನಿಖಾಧಿಕಾರಿ ಪಾತ್ರ ಸಿಕ್ಕಿದೆಯಂತೆ.

“ಇದೊಂದು ಕ್ರೈಮ್‌ ಥ್ರಿಲ್ಲರ್‌ ಚಿತ್ರ. ನಾನು ಸಾಕಷ್ಟು ಕಥೆ ಕೇಳಿದ್ದೆ. ಆದರೆ, “ರೈಮ್ಸ್‌’ ಕಥೆಯಲ್ಲಿ ಸಾಕಷ್ಟು ವಿಶೇಷತೆ ಇತ್ತು. ಹಾಗಾಗಿ ಒಪ್ಪಿಕೊಂಡೆ. ಪಾತ್ರ ವಿಭಿನ್ನ ವಾಗಿದೆ. ಕಥೆ ಕೂಡ ಹೊಸತನದಿಂದ ಕೂಡಿದೆ. ನವೆಂಬರ್‌ನಿಂದ ಶುರುವಾಗಲಿದೆ. ಮೊದಲ ಸಲ ಬ್ರೈನ್‌ಗೇಮ್‌ ಕುರಿತಾದ ಪಾತ್ರ ಮಾಡಿದ್ದೇನೆ. ಇದಕ್ಕಾಗಿ ಕಳೆದ ಎರಡು ತಿಂಗಳು ತಯಾರಿ ನಡೆಸಿದ್ದೇನೆ’ ಎಂದರು ಅಜಿತ್‌ ಜಯರಾಜ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next