Advertisement

NCP: ಅಜಿತ್‌ ಬಣವೇ ನಿಜವಾದ ಎನ್‌ಸಿಪಿ : ಇ.ಸಿ. ಆದೇಶ

12:06 AM Feb 07, 2024 | Team Udayavani |

ನವದೆಹಲಿ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಡುವೆ ಪಕ್ಷದ ಚಿಹ್ನೆ ಮತ್ತು ಹೆಸರಿಗಾಗಿ ತಿಂಗಳಿಂದ ನಡೆಯುತ್ತಿದ್ದ ಕಾದಾಟಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ಅಜಿತ್‌ ಪವಾರ್‌ ಬಣವೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಎಂದು ಚುನಾವಣೆ ಆಯೋಗ ಘೋಷಿಸಿದೆ. ಈ ಮೂಲಕ ಎನ್‌ಸಿಪಿ ಹೆಸರು ಮತ್ತು ಚಿಹ್ನೆ ಅಜಿತ್‌ ಅವರ ಪಾಲಾಗಿ, ಶರದ್‌ ಪವಾರ್‌ ಅವರಿಗೆ ಬಹುದೊಡ್ಡ ಹಿನ್ನೆಡೆಯಾದಂತಾಗಿದೆ.

Advertisement

ಕಳೆದ ವರ್ಷ ಜುಲೈನಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ಅಜಿತ್‌ ಬಣವು ಎನ್‌ಸಿಪಿ ಅಧಿಕೃತವಾದ ಚಿಹ್ನೆ ಮತ್ತು ಹೆಸರನ್ನು ಬಳಸಲು ಅನುಮತಿ ನೀಡುವಂತೆ ಕೋರಿ ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಎನ್‌ಸಿಪಿ ಶಾಸಕರ ಸಂಖ್ಯಾ ಬಲ ಪರೀಕ್ಷೆ ನಡೆಸಿತು. 53 ಶಾಸಕರ ಪೈಕಿ ಅಜಿತ್‌ ಪವಾರ್‌ ಬಣಕ್ಕೆ ಬೆಂಬಲ ನೀಡಿದವರ ಸಂಖ್ಯೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಅಜಿತ್‌ ಬಣವನ್ನೇ ನಿಜವಾದ ಎನ್‌ಸಿಪಿ ಎಂದು ಘೋಷಿಸಿ, ಪಕ್ಷದ ಚಿಹ್ನೆಯಾದ ಗಡಿಯಾರವನ್ನೂ ಚುನಾವಣೆಗೆ ಬಳಸಲು ಅನುಮತಿಸಲಾಗಿದೆ.

ಫೆ.26ರ ರಾಜ್ಯಸಭೆ ಚುನಾವಣೆ ದೃಷ್ಟಿಯಿಂದ ಶರದ್‌ ಪವಾರ್‌ ಅವರ ಬಣಕ್ಕೆ ಹೊಸದೊಂದು ಹೆಸರು ಮತ್ತು ಚಿಹ್ನೆಯನ್ನು ನಿಗದಿ ಪಡಿಸಿ ಫೆ.7ರ ಮಧ್ಯಾಹ್ನ 3ಗಂಟೆ ವೇಳೆಗೆ ಚುನಾವಣೆ ಆಯೋಗಕ್ಕೆ ತಿಳಿಸಲು ಕೇಳಲಾಗಿದೆ ಎಂದೂ ಆಯೋಗದ ಮೂಲಗಳು ತಿಳಿಸಿವೆ. ಅಜಿತ್‌ ಬಣ ಈ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದರೆ, ಶರದ್‌ ಬಣ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next