Advertisement

ಅಜಿಂಕ್ಯ ರಹಾನೆ 7 ಲಕ್ಷ ರೂ.ಗೆ ಹರಾಜು

06:20 AM Mar 04, 2018 | Team Udayavani |

ಮುಂಬಯಿ: ಟೀಮ್‌ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಮತ್ತು ಮುಂಬಯಿ ತಂಡದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಇಂದು ನಡೆದ ಟಿ20 ಮುಂಬೈ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ ಹರಾಜಿನಲ್ಲಿ ತಲಾ 7 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.

Advertisement

ಅಜಿಂಕ್ಯ ರಹಾನೆ ಮುಂಬೈ ನಾರ್ತ್‌ ತಂಡದ ಪಾಲಾದರೆ, ಯಾದವ್‌ ಮುಂಬೈ ನಾರ್ತ್‌ ಈಸ್ಟ್‌ ತಂಡ ಸೇರಿಕೊಂಡರು. ಭಾರತ ಟಿ20 ತಂಡದ ಉಸ್ತುವಾರಿ ನಾಯಕನಾಗಿರುವ ರೋಹಿತ್‌ ಶರ್ಮ ಅವರನ್ನು ಮುಂಬೈ ನಾರ್ತ್‌ ವೆಸ್ಟ್‌ ತಂಡ 6 ಲಕ್ಷ ರೂ.ಗೆ ಖರೀದಿಸಿದೆ. ಆದರೆ ರೋಹಿತ್‌ ಶ್ರೀಲಂಕಾ ತ್ರಿಕೋನ ಸರಣಿಯಲ್ಲಿ ಆಡುವ ಕಾರಣ ಮುಂಬೈ ಲೀಗ್‌ನಲ್ಲಿ ಆಡುವುದು ಅನುಮಾನ.

ಭಾರತ ತಂಡದ ಮತ್ತೂಬ್ಬ ಆಟಗಾರ ಶ್ರೇಯಸ್‌ ಅಯ್ಯರ್‌ ಅವರನ್ನು ಮುಂಬೈ ನಾರ್ತ್‌ ಸೆಂಟ್ರಲ್‌ ತಂಡ 5 ಲಕ್ಷ ರೂ. ನೀಡಿ ತನ್ನದಾಗಿಸಿಕೊಂಡಿದೆ. ರಹಾನೆ ಮತ್ತು ಅಯ್ಯರ್‌ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ.

ಆಲ್‌ರೌಂಡರ್‌ ಅಭಿಷೇಕ್‌ ನಾಯರ್‌ ಮುಂಬೈ ಸೌತ್‌ ತಂಡ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಿದ್ದೇಶ್‌ ಲಾಡ್‌ ಮುಂಬೈ ಸೌತ್‌ ಸೆಂಟ್ರಲ್‌ ತಂಡದ ಪಾಲಾಗಿದ್ದಾರೆ. ಇಬ್ಬರಿಗೂ ತಲಾ 4 ಲಕ್ಷ ರೂ. ಮೊತ್ತ ಲಭಿಸಿದೆ.

ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕ ಪೃಥ್ವಿ ಶಾ ಅವರನ್ನು ಮುಂಬೈ ನಾರ್ತ್‌ 2.80 ಲಕ್ಷ ರೂ.ಗೆ ಖರೀದಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next