Advertisement

ಕೃಷ್ಣ ನಟನೆಯ ‘ದಿಲ್‌ ಪಸಂದ್‌’ನಲ್ಲಿ ಅಜೇಯ್‌ ರಾವ್‌

12:08 PM Oct 24, 2022 | Team Udayavani |

ಡಾರ್ಲಿಂಗ್‌ ಕೃಷ್ಣ ನಾಯಕರಾಗಿರುವ “ದಿಲ್‌ ಪಸಂದ್‌’ ಚಿತ್ರ ನ.11ರಂದು ತೆರೆಕಾಣುತ್ತಿದೆ. ಈಗ ಸಿನಿಮಾದ ಬಿಡುಗಡೆ ಹೊತ್ತಿನಲ್ಲಿ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದು ಕೃಷ್ಣ ವರ್ಸಸ್‌ ಕೃಷ್ಣ.

Advertisement

ಏನಿದು ಕೃಷ್ಣ ವರ್ಸಸ್‌ ಕೃಷ್ಣ ಎಂದರೆ ಏನೆಂದು ನೀವು ಕೇಳಬಹುದು. “ದಿಲ್‌ ಪಸಂದ್‌’ ಚಿತ್ರದಲ್ಲಿ ಅಜೇಯ್‌ ರಾವ್‌ ಕೂಡಾ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಕೃಷ್ಣ ಸೀರಿಸ್‌ ಸಿನಿಮಾಗಳಲ್ಲಿ ನಟಿಸಿರುವ ಅಜೇಯ್‌ ರಾವ್‌ ಈಗ “ಡಾರ್ಲಿಂಗ್‌ ಕೃಷ್ಣ’ ಜೊತೆ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವನ್ನು ನೀವು ಅತಿಥಿ ಅಥವಾ ಪ್ರಮುಖ ಪಾತ್ರ ಎಂದಾದರೂ ಕರೆಯಬಹುದು.

ಈಗಾಗಲೇ ಹಾಡು, ಟೀಸರ್‌ ಮೂಲಕ ಗೆಲುವಿನ ಭರವಸೆ ಮೂಡಿಸಿರುವ ಸಿನಿಮಾ ಔಟ್‌ ಅಂಡ್‌ ಔಟ್‌ ಕಾಮಿಡಿ ಕಂ ಫ್ಯಾಮಿಲಿ ಡ್ರಾಮಾ. ಈ ಹಿಂದೆ “ಧೈರ್ಯಂ’, “ಮಳೆ’ ಸಿನಿಮಾಗಳನ್ನು ನಿರ್ದೇಶಿಸಿರುವ ಶಿವ ತೇಜಸ್‌ ಈ ಸಿನಿಮಾದ ನಿರ್ದೇಶಕರು. ರಶ್ಮಿ ಫಿಲಂಸ್‌ ಬ್ಯಾನರ್‌ ನಡಿ ಈ ಚಿತ್ರವನ್ನು ಸುಮನ್‌ ಕ್ರಾಂತಿ ನಿರ್ಮಿಸಿದ್ದಾರೆ.

ನಾಯಕ ಕೃಷ್ಣ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ಕಥೆ ಕೇಳಬೇಕಾದರೆ ಸಾಕಷ್ಟು ಖುಷಿ ಪಟ್ಟಿದೆ. ಸಾಕಷ್ಟು ಎಂಜಾಯ್‌ ಮಾಡಿಕೊಂಡು ಡಬ್ಬಿಂಗ್‌ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ ದಿಲ್‌ ಪಸಂದ್‌ ಎಲ್ಲರಿಗೂ ಪ್ರಿಯವಾಗಲಿದೆ. ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ’ ಎಂಬ ವಿಶ್ವಾಸ ನಾಯಕ ಕೃಷ್ಣ ಅವರದು.

ಇದನ್ನೂ ಓದಿ:ಸಿತ್ರಾಂಗ್ ಚಂಡಮಾರುತ: ಒಡಿಶಾ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷೆ

Advertisement

ಇತ್ತೀಚೆಷ್ಟೇ ಚಿತ್ರದ ಹಾಡೊಂದು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಸೆನ್ಸೇಷನಲ್‌ ಸಿಂಗರ್‌ ಮಂಗ್ಲಿ ಕಂಠಸಿರಿಯಲ್ಲಿ ಮೂಡಿಬಂದಿರುವ “ರಾಮ ರಾಮ…’ ಎಂಬ ಹಾಡಿಗೆ ಕೇಳುಗರು ಫಿದಾ ಆಗಿದ್ದಾರೆ. “ಜೇಮ್ಸ್’ ಖ್ಯಾತಿಯ ಚೇತನ್‌ ಕುಮಾರ್‌ ಸಾಹಿತ್ಯವಿರುವ ಈ ಹಾಡಿಗೆ ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸೂಪರ್‌ ಹಿಟ್‌ ಕಾಂಬಿನೇಷನ್‌ ಮೂಲಕ ಹೊರಬಂದಿರುವ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಅದಾಗಲೇ ಲಕ್ಷಾಂತರ ಹಿಟ್ಸ್‌ ದಾಖಲಾಗಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡನ್ನು ಹರಿಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next