Advertisement

ಉದ್ಯೋಗಕ್ಕೆ ಎಐಎಸ್‌ಎಫ್‌ ಆಗ್ರಹ

09:57 AM Jan 10, 2019 | Team Udayavani |

ಹರಪನಹಳ್ಳಿ: ಭಾರತ್‌ ಬಂದ್‌ ಬೆಂಬಲಿಸಿ ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್‌ ಮತ್ತು ಅಖೀಲ ಭಾರತ ಯುವಜನ ಫೆಡರೇಷನ್‌ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಯುವ ಜನತೆಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಯುವಕರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರ ಬಡ ಜನರನ್ನು ನಿರ್ಲಕ್ಷಿಸಿ ಸಿರಿವಂತರ ಪರವಾದ ಕಾನೂನುಗಳನ್ನು ಜಾರಿಗೆ ತಂದಿರುವ ಪರಿಣಾಮ ಶಿಕ್ಷಣದಿಂದ ವಂಚಿತಾಗಿದ್ದಾರೆ. ಕೂಡಲೇ ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಎಐಎಸ್‌ಎಫ್‌ ರಾಜ್ಯ ಸಂಚಾಲಕ ಎಚ್.ಎಂ. ಸಂತೋಷ್‌, ರಮೇಶನಾಯ್ಕ, ಕೊಟ್ರೇಶ್‌, ವಿನಯ್‌, ಶಶಿಕುಮಾರ ನಾಯ್ಕ, ಹಾಲೇಶ್‌, ಮಂಜುನಾಥ್‌ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next