Advertisement

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

03:51 AM Sep 30, 2024 | Team Udayavani |

ಬಂಗಾರಪೇಟೆ (ಕೋಲಾರ): ತಾಲೂಕಿನ ದೊಡ್ಡಕರಪನಹಳ್ಳಿ ಸಮೀಪ ಭಾನುವಾರ ಮಧ್ಯಾಹ್ನ ಭಾರತೀಯ ವಾಯುಪಡೆ “ಚೇತಕ್‌’ ಹೆಲಿಕಾಪ್ಟರ್‌ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತು.

Advertisement

ದೊಡ್ಡಕರಪನಹಳ್ಳಿಯ ಸಮೀಪ ಇರುವ ಕೆರೆ ಅಂಗಳದಲ್ಲಿ ಹೆಲಿಕಾಪ್ಟರ್‌ ಸುರಕ್ಷಿತವಾಗಿ ಭೂ ಸ್ಪರ್ಶ ಮಾ ಡಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಹೆಲಿಕಾಪ್ಟ ರ್‌ನಲ್ಲಿದ್ದ ಓರ್ವ ಮಹಿಳಾ ಪೈಲಟ್‌ ಸೇರಿದಂತೆ ಮೂವರು ಸುರಕ್ಷಿತವಾಗಿದ್ದಾರೆ.

ಹೆಲಿಕಾಪ್ಟರ್‌ಗೆ ಪೊಲೀಸ್‌ ಬಂದೋ ಬಸ್ತ್:
ತುರ್ತು ಭೂ ಸ್ಪರ್ಶ ಕುರಿತಂತೆ ವಾಯುಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಕೆಜಿಎಫ್‌ ಎಸ್ಪಿ ಕೆ.ಎಂ.ಶಾಂತ ರಾಜು ಭೇಟಿ ನೀಡಿ ಮಾ ಹಿತಿ ಪಡೆದರು. ತರಬೇತಿ ನಿಮಿತ್ತ ಯಲಹಂಕದಿಂದ ಚೆನ್ನೈನತ್ತ ತೆರಳುತ್ತಿದ್ದ ಹೆಲಿಕಾಪ್ಟರ್‌ ಕೋಲಾರದ ಕೆಜಿಎಫ್‌-ಬಂಗಾರಪೇಟೆ ವಲಯದಲ್ಲಿ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ದೋಷದಿಂದ ಸುರಕ್ಷಿತವಾಗಿ ತುರ್ತು ಭೂ ಸ್ಪರ್ಶ ನಡೆಸಿತ್ತು. ಯಲಹಂಕದಿಂದ ಹೆಲಿಕಾಪ್ಟರ್‌ ದುರಸ್ತಿಗೆ ತಾಂತ್ರಿಕ ಸಿಬ್ಬಂದಿ ಆ ಗ ಮಿಸುತ್ತಿದ್ದು, ಹೆಲಿಕಾಪ್ಟರ್‌ ಭೂಸ್ಪರ್ಶದ ಸ್ಥಳದಲ್ಲಿ ಕೆಜಿಎಫ್‌ ಪೊಲೀಸರು ಬಂದೋ ಬಸ್ತ್  ಕೈಗೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next