Advertisement

Patna ಸಭೆ ನಡೆಸಿದ ವಿಪಕ್ಷಗಳ ನಾಯಕರ ವಿರುದ್ಧ ಕಿಡಿ ಕಾರಿದ ಓವೈಸಿ

08:43 PM Jun 23, 2023 | Team Udayavani |

ಹೈದರಾಬಾದ್ : ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯ ಬಗ್ಗೆ ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಶುಕ್ರವಾರ (ಜೂನ್ 23) ತೀವ್ರ ವಾಗ್ದಾಳಿ ನಡೆಸಿ”ಈ ಎಲ್ಲಾ ರಾಜಕೀಯ ನಾಯಕರ ‘ಟ್ರ್ಯಾಕ್ ರೆಕಾರ್ಡ್’ ಏನು?” ಎಂದು ಪ್ರಶ್ನಿಸಿದ್ದಾರೆ.

Advertisement

‘ಕಾಂಗ್ರೆಸ್‌ನಿಂದಾಗಿ’ ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ನಿಜವಲ್ಲವೇ ಎಂದು ಓವೈಸಿ ಪ್ರಶ್ನಿಸಿದರು. 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ದೂರವಿಡಲು ಬಯಸುತ್ತೇವೆ ಮತ್ತು ನಾವು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.

ನಿತೀಶ್ ಕುಮಾರ್ ಗೆ ಪ್ರಶ್ನೆ
ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡ ನಿತೀಶ್ ಕುಮಾರ್ ಅವರನ್ನು ಟೀಕಿಸಿ, ಅವರು ಬಿಜೆಪಿಯಿಂದ ‘ಮಹಾಘಟಬಂಧನ್’ ಗೆ ಪದೇ ಪದೇ ಹಾರುತ್ತಿರುವುದನ್ನು ಪ್ರಶ್ನಿಸಿದರು. ಗೋಧ್ರಾ ಘಟನೆ ಸಂಭವಿಸಿದಾಗ ನಿತೀಶ್ ಕುಮಾರ್ ರೈಲ್ವೇ ಸಚಿವರಾಗಿದ್ದದ್ದು ಸರಿಯಲ್ಲವೇ? ಗುಜರಾತ್ ನರಮೇಧ ನಡೆದಾಗಲೂ ಅವರು ಬಿಜೆಪಿಯೊಂದಿಗೇ ಇದ್ದರು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಅವರು ಮುಖ್ಯಮಂತ್ರಿಯಾದರು, ಬಳಿಕ ಬಿಜೆಪಿ ತೊರೆದರು, ಮಹಾಘಟಬಂಧನ್ ರಚಿಸಿದರು, ಸಿಎಂ ಆದರು. ಮತ್ತೆ ಅವರನ್ನು ತೊರೆದರು, ಬಿಜೆಪಿ ಸೇರಿದರು, ಈಗ ಮತ್ತೆ ಅವರನ್ನು ತೊರೆದಿದ್ದಾರೆ ಎಂದು ಕಿಡಿ ಕಾರಿದರು.

ಶಿವಸೇನೆ (ಉದ್ಧವ್ ಬಣ) ‘ಜಾತ್ಯತೀತ ಪಕ್ಷ’ವಾಗಿದೆಯೇ ಎಂದು ಪ್ರಶ್ನಿಸಿದ ಓವೈಸಿ, ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ‘ಹೌದು, ಬಾಬರಿ ಮಸೀದಿ ಕೆಡವಿದ್ದಕ್ಕೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನಬಾಹಿರವಾಗಿ 370 ನೇ ವಿಧಿಯನ್ನು ತೆಗೆದುಹಾಕಿದಾಗ   ಬಿಜೆಪಿಯನ್ನು ಬೆಂಬಲಿಸಿದರು” ಎಂದರು.

ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಯಾರು ಎದುರಿಸಬಹುದು ಎಂಬ ಪ್ರಶ್ನೆಗೆ ಓವೈಸಿ, ಪ್ರಧಾನಿ ಮುಖವನ್ನು ಘೋಷಿಸುವುದಕ್ಕಿಂತ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುವ ಅಗತ್ಯವಿದೆ. 540 ಲೋಕಸಭಾ ಸ್ಥಾನಗಳಲ್ಲಿ ನರೇಂದ್ರ ಮೋದಿ ವಿರುದ್ಧ ಹೋರಾಟ ನಡೆಯಬೇಕು, ಮುಖಗಳನ್ನು ಹೊರತಂದರೆ ಬಿಜೆಪಿಗೆ ಲಾಭವಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next