Advertisement

ರಾಮ ನಾಥ್‌ ಕೋವಿಂದ್‌ಗೆ AIADMK ಪುರಚ್ಚಿ ತಲೈವಿ ಅಮ್ಮಾ ಬಣದ ಬೆಂಬಲ

11:36 AM Jun 22, 2017 | udayavani editorial |

ಚೆನ್ನೈ : ಮಾಜಿ ಮುಖ್ಯಮಂತ್ರಿ ಓ ಪನ್ನಿರಸೆಲ್ವಂ ನೇತೃತ್ವದ ಎಐಎಡಿಎಂಕೆ ಬಂಡುಕೋರ ಬಣ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ ನಾಥ್‌ ಕೋವಿಂದ್‌ ಅವರನ್ನು  ಜು.17ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಿದೆ.

Advertisement

ಪನ್ನೀರಸೆಲ್ವಂ ಅವರಿಂದು ಬೆಳಗ್ಗೆ ತಮ್ಮ ಹಿರಿಯ ಸಹೋದ್ಯೋಗಿಗಳ ಜತೆಗೆ ನಡೆಸಿದ ಸಲಹಾ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡರು ಎಂದು ಬಣದ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ (ಅಮ್ಮಾ) ಬಣವು ಕೋವಿಂದ್‌ ಅವರಿಗೆ ಬೆಂಬಲ ಪ್ರಕಟಿಸಿದ ಒಂದು ದಿನದ ತರುವಾಯ ಪುರಚ್ಚಿ ತಲೈವಿ ಅಮ್ಮಾ ಬಣದ ಈ ನಿರ್ಧಾರವು ಹೊರಬಂದಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next