Advertisement

ಮೋದಿ ಭೇಟಿಗಾಗಿ ದೆಹಲಿಗೆ ಧಾವಿಸಿದ ಪಳನಿ-ಪನ್ನೀರ್‌

07:40 AM Aug 12, 2017 | Team Udayavani |

ನವದೆಹಲಿ: ಎಐಎಡಿಎಂಕೆಯ ಎರಡೂ ಬಣಗಳ ವಿಲೀನ ಸುದ್ದಿ ಕೇಳಿಬರುತ್ತಿರುವಂತೆಯೇ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. 

Advertisement

ಇನ್ನೊಂದೆಡೆ, ಮಾಜಿ ಸಿಎಂ ಪನ್ನೀರ್‌ಸೆಲ್ವಂ ಅವರೂ ದೆಹಲಿಗೆ ಧಾವಿಸಿದ್ದು, ಅವರೂ ಪ್ರಧಾನಿ ಭೇಟಿಗೆ ಯತ್ನಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯ ದರ್ಶಿ ಶಶಿಕಲಾ ಮತ್ತು ಉಪಪ್ರಧಾನ ಕಾರ್ಯದರ್ಶಿ ದಿನ ಕರನ್‌ರನ್ನು ವಜಾ ಮಾಡಬೇಕು ಎಂಬ ಪನ್ನೀರ್‌ಬಣದ ಷರತ್ತುಗಳಿಗೆ ಒಪ್ಪಿಗೆ ನೀಡಿದ ಬಳಿಕ, ಎರಡೂ ಬಣಗಳು ಶೀಘ್ರದಲ್ಲೇ ವಿಲೀನಗೊಳ್ಳಲಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಏತನ್ಮಧ್ಯೆ, ಶಶಿಕಲಾ, ದಿನಕರನ್‌ರ ಹುದ್ದೆ ಅಮಾನ್ಯಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಪನ್ನೀರ್‌ ಬಣ ಒತ್ತಾಯಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next