Advertisement

ಆಹಾರ್‌ನ ನಿಯೋಗದಿಂದ ಸಚಿವರ ಭೇಟಿ

12:03 PM Jun 20, 2017 | Team Udayavani |

ಮುಂಬಯಿ: ಆಹಾರ್‌ನ ಅಧ್ಯಕ್ಷ ಆದರ್ಶ್‌ ಶೆಟ್ಟಿ ಅವರ ನೇತೃತ್ವದ ನಿಯೋಗವೊಂದು ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್‌ ಮುಂಗಂತಿವಾರ್‌ ಅವರನ್ನು ಭೇಟಿಯಾಯಿತು. ಜಿಎಸ್‌ಟಿ ಜಾರಿಯಿಂದಾಗಿ ಹೊಟೇಲ್‌ ಉದ್ಯಮದ ಮೇಲಾಗುವ ವಿವಿಧ ದುಷ್ಪರಿಣಾಮಗಳ ಕುರಿತಂತೆ ನಿಯೋಗವು ಸಚಿವರೊಂದಿಗೆ ಚರ್ಚಿಸಿತು. ಹೊಟೇಲ್‌ ಉದ್ಯಮಕ್ಕಾಗಿನ ಜಿಎಸ್‌ಟಿ ದರ ಮಾದರಿ ಬದಲಾವಣೆ ಮತ್ತು ಮರುಪರಿಶೀಲನೆಗಾಗಿ ಕೋರುವ ಮನವಿಯೊಂದನ್ನು ಈ ಸಂದರ್ಭದಲ್ಲಿ ಸಚಿವರಿಗೆ ಸಲ್ಲಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ಈ ಮನವಿಯನ್ನು ಕೇಂದ್ರ ಹಣಕಾಸು ಸಚಿವರಿಗೆ ಕಳುಹಿಸುವ ಜತೆಗೆ ದಿಲ್ಲಿಯಲ್ಲಿ ನಡೆಯಲಿರುವ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸುವ ಬಗ್ಗೆ ಮುಂಗಂತಿವಾರ್‌ ಅವರು ನಿಯೋಗಕ್ಕೆ ಭರವಸೆ ನೀಡಿದರು. ಆಹಾರ್‌ ನಿಯೋಗದಲ್ಲಿ ಆಹಾರ್‌ನ ಅಧ್ಯಕ್ಷ ಆದರ್ಶ್‌ ಬಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next