Advertisement

ಅಗ್ರೋಟೆಕ್‌ ಕಂಪನಿ ಏಜೆಂಟ್‌ ಆತ್ಮಹತ್ಯೆ

11:18 AM Nov 12, 2017 | |

ಬೆಂಗಳೂರು: ಅಗ್ರೋಟೆಕ್‌ ಕಂಪನಿಯ ಏಜೆಂಟ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಂಗೇರಿಯ
ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶನಿವಾರ ನಡೆದಿದೆ. ಗಿರೀಶ್‌ ಕುಮಾರ್‌ (40) ಮೃತರು. 

Advertisement

ಪತ್ನಿ ಮಕ್ಕಳೊಂದಿಗೆ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ವಾಸವಿದ್ದ ಗಿರೀಶ್‌, ಅಗ್ರೋಟೆಕ್‌ ಕಂಪನಿ ಕಂಪನಿ ಹೆಸರಲ್ಲಿ ಗ್ರಾಹಕರಿಂದ ಹಣ ಠೇವಣಿ ಪಡೆದು, ವಾಪಸ್‌ ಮಾಡಿರಲಿಲ್ಲ. ಗ್ರಾಹಕರು ಹಣ ಮರಳಿಸಲು ಒತ್ತಡ ಹಾಕಿದಾಗ 15 ಲಕ್ಷ ರೂ. ಸಾಲ ಮಾಡಿ ಹಣ ಹಿಂದಿರುಗಿಸಿದ್ದರು. ಆದರೂ ಬಾಕಿ ತೀರದ ಕಾರಣ ಗ್ರಾಹಕರು ದುಂಬಾಲು ಬಿದಿದ್ದರು. ಜತೆಗೆ ಎರಡು ಕಂತಿನ ಹಣ ಪಾವತಿಸದ ಕಾರಣ ಕಂಪನಿಯವರು ಬೈಕ್‌ ಜಪ್ತಿ ಮಾಡಿದ್ದರು. ಇದರಿಂದ ಬೇಸರಗೊಂಡ ಗಿರೀಶ್‌, ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳಿಸಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next