Advertisement

ಅಗ್ರಿಗೋಲ್ಡ್‌ ವಂಚನೆ: 8ರಂದು ಗ್ರಾಹಕರ ಪ್ರತಿಭಟನೆ

06:43 AM Jul 06, 2019 | Lakshmi GovindaRaj |

ಬೆಂಗಳೂರು: ಅಗ್ರಿಗೋಲ್ಡ್‌ ಕಂಪನಿಯಿಂದ ವಂಚನೆಗೊಳಗಾದ ಗ್ರಾಹಕರಿಗೆ ಸರ್ಕಾರ ಶೀಘ್ರ ಪರಿಹಾರ ನೀಡುವಂತೆ ಆಗ್ರಹಿಸಿ ಜು.8ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಗ್ರಿಗೋಲ್ಡ್‌ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ನಾಗಭೂಷಣ ರಾವ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 8ರಂದು ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನವರೆಗೆ ಮೆರವಣಿಗೆ ಮೂಲಕ ತೆರಳಿ, ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ರಾಜ್ಯದ 8.5 ಲಕ್ಷ ಗ್ರಾಹಕರಿಗೆ ಸುಮಾರು 1,700 ಕೋಟಿ ರೂ. ವಂಚನೆಯಾಗಿದೆ.

ಆದ್ದರಿಂದ ರಾಜ್ಯದಲ್ಲಿನ ಅಗ್ರಿಗೋಲ್ಡ್‌ ಕಂಪನಿಯ ಆಸ್ತಿಯನ್ನು ಹರಾಜು ಹಾಕಿ, ಹರಾಜಾದ ಹಣವನ್ನು ಗ್ರಾಹಕರಿಗೆ ಹಂಚಬೇಕು ಹಾಗೂ ಈ ವಂಚನೆ ಹಗರಣದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಿದ್ದೆವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next