Advertisement

ರಸಗೊಬ್ಬರ ಅಂಗಡಿ ದಾಖಲೆ ಪರಿಶೀಲಿಸಿದ ಕೃಷಿ ಅಧಿಕಾರಿಗಳು

03:09 PM Dec 09, 2021 | Team Udayavani |

ದೇವದುರ್ಗ: ಪಟ್ಟಣದ ವಿನಾಯಕ ಟ್ರೇಡರ್ಸ್‌, ಎಂಎಸ್‌ ಪಾಟೀಲ್‌ ಫರ್ಟಿಲೈಸರ್ಸ್‌, ಶ್ರೀದೇವಿ ಟ್ರೇಡರ್ಸ್‌, ಶ್ರೀಗುರು ಟ್ರೇಡರ್ಸ್‌ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಸಹಾಯಕ ಕೃಷಿ ನಿರ್ದೇಶಕಿ ಡಾ| ಎಸ್‌. ಪ್ರಿಯಾಂಕ ಭೇಟಿ ನೀಡಿ ದಾಖಲಾತಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಪರವಾನಗಿ ಮತ್ತು ಸಮರ್ಪಕ ದಾಖಲೆಗಳಿಲ್ಲದೇ ತೆರೆಯಲಾದ ಎಂ.ಎಸ್‌ ಪಾಟೀಲ್‌ ಫರ್ಟಿಲೈಸರ್ಸ್‌ ಹಾಗೂ ಶ್ರೀದೇವಿ ಟ್ರೇಡರ್ಸ್‌ ಅಂಗಡಿಗಳನ್ನು ಮುಚ್ಚಿಸಲಾಯಿತು. ನ್ಯೂನತೆಗಳನ್ನು ಸರಿಪಡಿಸಿಕೊಂಡು ನಂತರ ಪರವಾನಗಿ ನೀಡಲಾಗುವುದು ಎಂದು ಅಂಗಡಿ ಮಾಲೀಕರಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇನ್ನುಳಿದ ಕೆಲ ಅಂಗಡಿಗಳಲ್ಲಿ ದರಪಟ್ಟಿ, ದಾಸ್ತಾನು ಪುಸ್ತಕ ದಾಖಲೆಗಳು ಇಲ್ಲದಿರುವುದರಿಂದ ಏಳು ದಿನದ ಒಳಗೆ ಉತ್ತರ ನೀಡುವಂತೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದರು. ಯಾವುದೇ ಕಾರಣಕ್ಕೆ ರೈತರಿಗೆ ಮೋಸ ಆಗದಂತೆ ಅಂಗಡಿ ಮಾಲೀಕರು ಎಚ್ಚರ ವಹಿಸಬೇಕು. ಪದೇ-ಪದೇ ಇಂತಹ ತಪ್ಪು ಘಟನೆಗಳು ಆಗದಂತೆ ನಿಗಾವಹಿಸಬೇಕು. ಪ್ರತಿಯೊಬ್ಬ ರಸಗೊಬ್ಬರ ಮಾರಾಟ ಅಂಗಡಿ ಮಾಲೀಕರು ದಾಸ್ತಾನು ದರದ ಪಟ್ಟಿಯನ್ನು ಅಂಗಡಿ ಮುಂಭಾಗದಲ್ಲಿ ಬೋರ್ಡ್‌ ಹಾಕಬೇಕು. ಕೃಷಿ ಇಲಾಖೆ ನಿಯಮಗಳು ತಪ್ಪದೇ ಪಾಲಿಸಬೇಕು ಎಂದು ಮಾಲೀಕರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next