Advertisement

ನೋಂದಣಿ ರಹಿತ ಕ್ರಿಮಿನಾಶಕ ಮಾರಾಟ: ಕೃಷಿ ಜಾಗೃತ ದಳದ ಅಧಿಕಾರಿಗಳಿಂದ 3 ಅಂಗಡಿ ಸೀಝ್

05:31 PM Oct 06, 2020 | sudhir |

ವಿಜಯಪುರ : ಜಿ.ಪಂ. ನಲ್ಲಿ ಕಳಪೆ ಕ್ರಿಮಿನಾಶಕ ವ್ಯಾಪಕ ಮಾರಾಟ ಕುರಿತು ಪ್ರತಿಧ್ವನಿಸಿದ 24 ಗಂಟೆ ಕಳೆಯುವ ಮೊದಲೇ ದಾಳಿ ನಡೆಸಿರುವ ಕೃಷಿ ಜಾಗೃತ ದಳದ ಅಧಿಕಾರಿಗಳು, ಪ್ರಕರಣ ದಾಖಲಿಸಿ ಅಂಗಡಿ-ಗೋದಾಮುಗಳನ್ನು ಸೀಝ್ ಮಾಡಿದ್ದಾರೆ.

Advertisement

ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣಗಳಲ್ಲಿ ರಸಗೊಬ್ಬರ-ಕ್ರಿಮಿನಾಶಕ ಮಾರಾಟದ 3 ಅಂಗಡಿಗಳ ಮೇಲೆ ಕೃಷಿ ಇಲಾಖೆಯ ಬೆಳಗಾವಿ ಜಾಗೃತ ದಳ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ದಾಳಿಯ ವೇಳೆ 2 ಅಂಗಡಿ 1 ಗೋದಾಮು ಸೀಝ್ ಮಾಡಿದ್ದಾರೆ. ಅಲ್ಲದೇ ನೋಂದಣಿ ಹಾಗೂ ಪರವಾನಿಗೆ ರಹಿತವಾದ ಕ್ರಿಮಿನಾಶಕಗಳನ್ನು ವಶಕ್ಕೆ‌ಪಡೆದಿರುವ ಅಧಿಕಾರಿಗಳು, ಅಂಗಡಿ ಮಾಲಿಕರ ವಿರುದ್ಧ ಕೋರ್ಟನಲ್ಲಿ ಮೊಕದ್ದಮೆ ದಾಖಲಿಸುದಾಗಿ ಹೇಳಿದ್ದಾರೆ.

ಇದನ್ನೂ ಓದಿ :ಮಾಸ್ಕ್ ಧರಿಸದ ಮಹಿಳೆಗೆ ದಂಡ! ಆಕ್ಷೇಪಿಸಿದ ಕಾರ್ಪೊರೇಟರ್ ಕಾಲು ಮುರಿದ ಪೊಲೀಸರು

ತಾಳಿಕೋಟೆ ಪಟ್ಟಣದಲ್ಲಿ ಒಂದು ಅಂಗಡಿ ಮಾಲಿಕನಿಗೆ ನೋಟಿಸ್ ನೀಡಿದ್ದು, 40 ಸಾವಿರ ರೂ ಮೌಲ್ಯದ ನೋಂದಣಿ ರಹಿತ ಕೀಟನಾಶಕಗಳ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next