Advertisement

Agricultural land ಅಕ್ರಮ ಪ್ರವೇಶಿಸಿ ಹಾನಿ; ಜೀವ ಬೆದರಿಕೆ ಆರೋಪ

11:59 PM Aug 09, 2023 | Team Udayavani |

ಸುಬ್ರಹ್ಮಣ್ಯ: ಕೃಷಿ ಜಾಗಕ್ಕೆ ಅಕ್ರಮ ಪ್ರವೇಶಿಸಿ ಕೃಷಿ ಹಾನಿ ಮಾಡಿದ ಹಾಗೂ ಜೀವ ಬೆದರಿಕೆ ಹಾಕಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಡಬ ತಾಲೂಕಿನ ಬಳ್ಪ ಗ್ರಾಮದ ನಿವಾಸಿ ಚಂದ್ರಯ್ಯ ಆಚಾರ್ಯ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ಚಂದ್ರಯ್ಯ ಬಳ್ಪ ಗ್ರಾಮದಲ್ಲಿ ಕೃಷಿ ಜಾಗ ಹೊಂದಿದ್ದು, ಬಳ್ಪದ ಭರತ್‌ ಗೌಡ ಹಾಗೂ ಜಯಶ್ರೀ ಎಂಬವರು ಆ. 8ರಂದು ಚಂದ್ರಯ್ಯ ಅವರ ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ 3 ಅಡಿಕೆ ಗಿಡಗಳನ್ನು ಕಿತ್ತು ಬಿಸಾಡಿ ಕೃಷಿಯನ್ನು ಹಾನಿ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಪ ಗ್ರಾಮದ ನಿವಾಸಿ ಭರತ್‌ ಗೌಡ ಎಂಬವರು ನೀಡಿದ ದೂರಿನಂತೆ ಚಂದ್ರಯ್ಯ ಆಚಾರಿ, ಮತ್ತು ಅವರ ಇಬ್ಬರು ಮಕ್ಕಳು, ಹಾಗೂ ಬಾಲಕೃಷ್ಣ ಆಚಾರಿ ಎಂಬುವರು ಭರತ್‌ ಗೌಡರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next