Advertisement
ಮುಂಗಾರು ಮಳೆ ಸಕಾಲಕ್ಕೆ ಬಾರದೆ ಭತ್ತ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈಗ ಭತ್ತ ಬೆಳೆಯುವುದಕ್ಕೆ ರೈತರು ಹೆಚ್ಚು ಆಸಕ್ತರಾಗಿದ್ದಾರೆ. ಭೂಮಿ ಯನ್ನು ಉಳುಮೆ ಮಾಡುವುದು, ಸಸಿ ಮಡಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಲವೆಡೆ ಹದಗೊಳಿಸಿದ ಭೂಮಿಯಲ್ಲಿ ಭತ್ತದ ನಾಟಿ ಕಾರ್ಯವೂ ಚುರುಕುಗೊಂಡಿದೆ.
Related Articles
ಮಾಡಿಲ್ಲ.
Advertisement
ರೈತಸಂಪರ್ಕ ಕೇಂದ್ರದಿಂದ 120 ದಿನದಲ್ಲಿ ಬೆಳೆಯಬಹುದಾದ ಎಂಟಿಯು-1001 ಹಾಗೂ ಐಆರ್-64 ತಳಿಯ ಭತ್ತದ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ. ದೀರ್ಘಾವಧಿ ಬೆಳೆಯಾದ ಜಯಾ ತಳಿಯ ಭತ್ತವನ್ನು ನೀಡಲಾಗುತ್ತಿಲ್ಲ. ಅದು 140 ದಿನದ ಬೆಳೆಯಾಗಿದ್ದು, ಹಲವು ರೈತರು ಹೊರಗಿನಿಂದ ತಂದು ಜಯಾ ಭತ್ತವನ್ನು ಬಿತ್ತನೆ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
21 ಟಿಎಂಸಿ ಅಡಿ ನೀರು: ಹಾಲಿ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ 97.70 ಅಡಿಗೆ ಕುಸಿದಿದೆ. ಜಲಾಶಯಕ್ಕೆ 156 ಕ್ಯುಸೆಕ್ ನೀರು ಮಾತ್ರ ಹರಿದುಬರುತ್ತಿದ್ದು, ಜಲಾಶಯದಿಂದ 3715 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ 2811 ಕ್ಯುಸೆಕ್ ನೀರು ಹಾಗೂ ನದಿಗೆ 904 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಜಲಾಶಯದಲ್ಲಿ 21.35 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 79.24 ಅಡಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶ ಯಕ್ಕೆ 264 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. 254 ಕ್ಯುಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು.
ರೈತರಲ್ಲಿ ಗೊಂದಲ: ಬೇಸಿಗೆ ಬೆಳೆಗೆ ನಾಲ್ಕು ಕಟ್ಟು ನೀರು ಕೊಡುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಒಪ್ಪಿ$ಕೊಂಡಿದ್ದಾರೆ. ಆದರೆ, ಬೆಳೆದು ನಿಂತಿರುವ ಬೆಳೆಗಳಿಗಷ್ಟೇ ನೀರು ಎಂದು ತೀರ್ಮಾನವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೂ ಇನ್ನೊಂದೆಡೆ ಭತ್ತದ ಬಿತ್ತನೆ ಬೀಜಗಳನ್ನು ನೀಡುವಂತೆ ಸೂಚಿಸಲಾಗಿದೆ. ಇದರಿಂದ ರೈತರು ಸಹಜವಾಗಿ ಗೊಂದಲಕ್ಕೆ ಒಳಗಾಗಿದ್ದಾರೆ.
ಅಲ್ಲದೆ, ಬೇಸಿಗೆ ಬೆಳೆಗೆ ಕೆಆರ್ಎಸ್ನಿಂದ 15 ದಿನ ನೀರು ಹರಿಸುವುದು ಮುಂದಿನ 15 ದಿನ ನೀರು ನಿಲ್ಲಿ ಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ತೀರ್ಮಾನಿಸಲಾಗಿದೆ. ಆದರೆ, ಹದಿನೈದು ದಿನ ನೀರು ನಿಲ್ಲಿಸು ವುದರಿಂದ ರೈತರಿಗೆ ತೊಂದರೆಯಾಗಲಿದೆ. ಅದಕ್ಕಾಗಿ 10 ದಿನಕ್ಕೊಮ್ಮೆ ನೀರು ಹರಿಸಿ ನಂತರ 10 ದಿನ ಬಿಟ್ಟು ನೀರು ಹರಿಸಬೇಕೆನ್ನುವುದು ರೈತರ ಆಗ್ರಹವಾಗಿದೆ.
ಬೇಸಿಗೆ ಬೆಳೆಗೆ ನೀರು ಹರಿಸುತ್ತಿರುವುದರಿಂದ ರೈತರು ಭತ್ತ ಮತ್ತ ರಾಗಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಭತ್ತದ ಸಸಿ ಮಡಿ ಮಾಡಿಕೊಳ್ಳುವುದು, ಭೂಮಿಯನ್ನು ಹದಗೊಳಿಸುವುದು, ಬಿತ್ತನೆ ಚಟುವಟಿಕೆ ಪ್ರಕ್ರಿಯೆ ಕಂಡುಬರುತ್ತಿದೆ.ಭತ್ತದ ಜೊತೆಯಲ್ಲಿ ರಾಗಿ ಬಿತ್ತನೆಯೂ ಸಾಗಿದೆ. ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳಿಂದ ಭತ್ತದ ಬಿತ್ತನೆ ಬೀಜಗಳನ್ನೂ ವಿತರಿಸಲಾಗುತ್ತಿದೆ.
● ರಾಜಸುಲೋಚನಾ, ಜಂಟಿ ಕೃಷಿ ನಿರ್ದೇಶಕಿ