Advertisement

Prague: ನಿತ್ಯಾನಂದ ಜತೆಗೆ ಒಪ್ಪಂದ- ಅಧಿಕಾರಿ ವಜಾ

09:50 PM Dec 01, 2023 | Team Udayavani |

ಅಸುನ್ಸಿಯಾನ್‌: ಭಾರತ ಬಿಟ್ಟು ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿಯ ಸ್ವಘೋಷಿತ ದೇಶವಾದ “ಕೈಲಾಸ’ದೊಂದಿಗೆ ಸಹಕಾರ ಒಪ್ಪಂದ ಮಾಡಿಕೊಂಡ ಪೆರುಗ್ವೆಯ ಹಿರಿಯ ಸರ್ಕಾರಿ ಅಧಿಕಾರಿಗೆ ಗೇಟ್‌ಪಾಸ್‌ ನೀಡಲಾಗಿದೆ.

Advertisement

ಅಸ್ತಿತ್ವದಲ್ಲೇ ಇಲ್ಲದ ದೇಶದೊಂದಿಗೆ ಒಪ್ಪಂದ ಮಾಡಿಕೊಂಡ ಆರೋಪದ ಮೇರೆಗೆ ಪೆರುಗ್ವೆಯ ಕೃಷಿ ಸಚಿವಾಲಯದ ಅಧಿಕಾರಿಯ ಸ್ಥಾನದಿಂದ ಅರ್ನಾಲ್ಡೋ ಚಮೋರೋರನ್ನು ವಜಾ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರ್ನಾಲ್ಡೋ, “ತಮ್ಮನ್ನು ತಾವು ದಕ್ಷಿಣ ಅಮೆರಿಕದ ದ್ವೀಪ ಪ್ರದೇಶವಾದ ಯುನೈಟೆಡ್‌ ಸ್ಟೇಟ್ಸ್‌ ಆಫ್ ಕೈಲಾಸದ ಪ್ರತಿನಿಧಿಗಳು ಎಂದು ಹೇಳಿಕೊಂಡು ಕೆಲವು ಅಧಿಕಾರಿಗಳು ನಮ್ಮ ಬಳಿ ಬಂದಿದ್ದರು. ಪೆರುಗ್ವೆಗೆ ನೆರವಾಗುವುದಾಗಿ ತಿಳಿಸಿದ ಅವರು, ಹಲವು ಯೋಜನೆಗಳಿಗೆ ಸಂಬಂಧಿಸಿ ಪ್ರಾತ್ಯಕ್ಷಿಕೆಯನ್ನೂ ನೀಡಿದರು. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಿಸುವ ನಿಟ್ಟಿನಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅವರ ಉದ್ದೇಶವೇನಿತ್ತು ಎಂಬುದು ನಮಗೆ ಗೊತ್ತಿರಲಿಲ್ಲ, ಅವರು ನಮ್ಮನ್ನು ಮೂರ್ಖರನ್ನಾಗಿಸಿದರು. ಇದೇ ಕಾರಣಕ್ಕಾಗಿ ನಾನು ಈಗ ಹುದ್ದೆ ಕಳೆದುಕೊಳ್ಳಬೇಕಾಯಿತು’ ಎಂದಿದ್ದಾರೆ.

ಜತೆಗೆ, ಕೈಲಾಸದ ಪ್ರತಿನಿಧಿಗಳು ಸಚಿವ ಕಾರ್ಲೋಸ್‌ ಗಿಮೆನೆಝ್ರನ್ನೂ ಭೇಟಿಯಾಗಿದ್ದರು ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next