Advertisement

ಮಿತ್ರ ಪಕ್ಷವನ್ನು ನಡೆಸಿಕೊಳ್ಳುವ ಬಿಜೆಪಿ ರೀತಿ ಬದಲಾಗಿದೆ: ಠಾಕ್ರೆ

11:23 AM Feb 20, 2019 | Team Udayavani |

ಮುಂಬಯಿ : ಮಿತ್ರ ಪಕ್ಷಗಳನ್ನು ನಡೆಸಿಕೊಳ್ಳುವ ಬಿಜೆಪಿಯ ರೀತಿ ಬದಲಾಗಿರುವ ಕಾರಣ ನಾವು ಅದರೊಂದಿಗೆ ಕೈಜೋಡಿಸಿದ್ದೇವೆ ಎಂದು ಶಿವ ಸೇನೆಯ ಉದ್ಧವ್‌ ಠಾಕ್ರೆ ಹೇಳಿದ್ದಾರೆ. 

Advertisement

ತಮ್ಮ ನಿವಾಸದಲ್ಲಿ ಶಿವಸೇನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಠಾಕ್ರೆ, ಲೋಕಸಭಾ ಚುನಾವಣೆಯಲ್ಲಿ ಜತೆಗೂಡಿ ಹೋರಾಟಲು ಬಿಜೆಪಿ ಮತ್ತು ಶಿವ ಸೇನೆ ನಿರ್ಧರಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಶಿವ ಸೇನೆಯ ಮುಖ್ಯಮಂತ್ರಿಯನ್ನು ಕಾಣಲು ನಾನು ಬಯಸಿದ್ದೇನೆ; ನಾನು ಈಗಾಗಲೇ ಈ ಸಂಬಂಧ ಒಪ್ಪಂದವನ್ನು ಗೆದ್ದಿದ್ದೇನೆ; ನಾವು ಈಗಿನ್ನು ನಮ್ಮ ಮುಂದಿರುವ ನೈಜ ಸಮರವನ್ನು ಗೆಲ್ಲಬೇಕಿದೆ ಎಂದು ಠಾಕ್ರೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next