Advertisement

ಅಗ್ರಹಾರ ಕೃಷ್ಣಮೂರ್ತಿಗೆ ದಂಡ: ಆದೇಶ ರದ್ದುಗೊಳಿಸಿದ ಹೈಕೋರ್ಟ್‌

11:11 PM Aug 02, 2019 | Lakshmi GovindaRaj |

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ 30 ಲಕ್ಷ ರೂ. ದಂಡ ವಿಧಿಸಿ ಅಕಾಡೆಮಿಯ ಶಿಸ್ತು ಸಮಿತಿ ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಶಿಸ್ತು ಸಮಿತಿ ದಂಡ ವಿಧಿಸಿ 2014ರ ಜೂ.3ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅಗ್ರಹಾರ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಪಿ.ಬಿ. ಭಜಂತ್ರಿ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

Advertisement

ಹಣ ದುರುಪಯೋಗ ಹಾಗೂ ಪಕ್ಷ ಪಾತದ ನಿರ್ಧಾರಗಳ ಆರೋಪ ಹಿನ್ನೆಲೆ ಯಲ್ಲಿ ತನಿಖೆ ನಡೆಸಿದ್ದ ಅಕಾಡೆಮಿಯ ಶಿಸ್ತು ಸಮಿತಿ 30 ಲಕ್ಷ ರೂ. ದಂಡ ವಿಧಿಸಿ ಆದೇಶಿ ಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ನಿವೃತ್ತ ಅಧಿಕಾರಿಯ ವಿರುದ್ಧ ಅಕಾಡೆಮಿ ಆ ರೀತಿ ದಂಡ ವಿಧಿಸಿರುವುದು ಸರಿಯಲ್ಲ ಎಂದು ಹೇಳಿರುವ ನ್ಯಾಯಪೀಠ, ದಂಡ ವಿಧಿಸುವುದಾದರೆ ಹಾಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿಗೆ ವಿಧಿಸಬಹುದೇ ಹೊರತು ನಿವೃತ್ತರಾದವರಿಗಲ್ಲ.

ಏಕೆಂದರೆ ಅಕಾಡೆಮಿಯ ಬೈಲಾಗಳಲ್ಲಿ ಆ ರೀತಿ ನಿವೃತ್ತ ಸಿಬ್ಬಂದಿಗೆ ದಂಡ ವಿಧಿಸಲು ಅಧಿಕಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಮೇ 2006ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿ ನೇಮಕ ಗೊಂ ಡಿದ್ದ ಅಗ್ರಹಾರ ಕೃಷ್ಣಮೂರ್ತಿ, 2013ರ ಜ.30ರಂದು ನಿವೃತ್ತರಾಗಿದ್ದರು. ಆದರೆ, ಅದಕ್ಕೂ ಮೊದಲೇ 2012ರಲ್ಲಿ ತನಿಖೆ ಆರಂಭಿಸಿದ್ದ ಶಿಸ್ತು ಸಮಿತಿ 2014ರ ಜೂ.3ರಂದು 30 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next