Advertisement

40 ನೇ ವಯಸ್ಸಿನಲ್ಲಿ ಕಲಾತ್ಮಕ ಪ್ರಯಾಣ ಪ್ರಾರಂಭಿಸಿ ಯಶಸ್ಸು ಕಂಡ ಮೈತ್ರೇಯಿ

11:30 AM Feb 23, 2022 | Team Udayavani |

ಸಾಧಿಸಲು ವಯಸ್ಸಿನ ಅಡ್ಡಿಯಿಲ್ಲ, ಶ್ರಮ, ಮತ್ತು ಉತ್ಸಾಹ, ಶ್ರದ್ಧೆ ಇದ್ದರೆ ವಯಸ್ಸು ಅನ್ನುವುದು ಕೇವಲ ನೆಪ ಮಾತ್ರ ಎನ್ನುವುದನ್ನು  ಉಡುಪಿ ಮೂಲದ ಕನ್ನಡತಿ,ಈ ಸಾಧಕಿ ಮಾಡಿ ತೋರಿಸಿದ್ದಾರೆ. ಹೌದು, ಇವರು ಮೈತ್ರೇಯಿ ಕಾರಂತ್. ಗಣಿತ ಬೋಧನೆಯನ್ನು ಮಾಡುತ್ತಿದ್ದ ಕಾರಂತ್ ಅವರು 40 ನೇ ವಯಸ್ಸಿನಲ್ಲಿ ನಟನಾ ತರಗತಿಗಳಿಗೆ ಸಹಿ ಹಾಕಿದರು. ಈಗ ನಟ, ನಿರ್ಮಾಪಕಿ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟಿಯಾಗಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ.

Advertisement

ನಿಜವಾದ ಉತ್ಸಾಹಕ್ಕೆ ಕೊನೆಯ ದಿನಾಂಕವಿದೆಯೇ ಎಂದು ಅವರು ನಮ್ಮನ್ನು ಪ್ರಶ್ನಿಸುತ್ತಾರೆ. ನಟಿ , ನಿರ್ಮಾಪಕ, ಬರಹಗಾರ್ತಿ, ಮಾನವತಾವಾದಿ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿರುವ ಮೈತ್ರೇಯಿ ತಡವಾಗಿ ಹೊಸ ಬದುಕಿನತ್ತ ಬಂದರೂ, ಜನಮನ ಗೆಲ್ಲುವಲ್ಲಿ ಬಹು ಬೇಗನೆ ಯಶಸ್ಸು ಕಂಡಿದ್ದಾರೆ.

ವಿವಿಧ ಟಿವಿ ಸರಣಿಗಳು ಮತ್ತು ಚಲನಚಿತ್ರಗಳ ಭಾಗವಾಗಿರುವ ಈ ಬಹು-ಪ್ರತಿಭಾನ್ವಿತ ಪ್ರದರ್ಶಕಿ  ಸಾಧನೆಗೆ ಅಡ್ಡಿಯಾಗುವ ಗಡಿಗಳನ್ನು ತೊಡೆದು ಮುಂದೆ ಸಾಗಿದ್ದಾರೆ.

ವಿಶೇಷವಾಗಿ, ಹಾಂಗ್ ಕಾಂಗ್‌ನಲ್ಲಿ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ ಅವರು ‘ನಿಜವಾದ ಉತ್ಸಾಹಕ್ಕೆ ಯಾವುದೇ ಕೊನೆಯ ದಿನಾಂಕವಿಲ್ಲ’ ಎಂದು ಹೇಳಿರುವುದು ಹಲವರಿಗೆ ಸ್ಪೂರ್ತಿಯಾಗಿದೆ.

ಮೈತ್ರೇಯಿ ಅವರು ದಾನ ಧರ್ಮಗಳ ಮೂಲಕವೂ ಹಲವರ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ನಿರಾಶ್ರಿತತೆಯನ್ನು ಅನುಭವಿಸುತ್ತಿರುವ ಜನರಿಗೆ ಆಹಾರ ನೀಡುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮಾತ್ರವಲ್ಲದೆ ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‌ನಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲು ತನ್ನ ಪ್ರದರ್ಶನಗಳಿಂದ ಬಂದ ಹಣವನ್ನು ಬಳಸಿ ಹೃದಯ ವೈಶಾಲ್ಯತೆ ತೋರಿದ್ದಾರೆ.

Advertisement

ತನ್ನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಉತ್ಸಾಹವನ್ನು ತುಂಬುವ ಮೈತ್ರೇಯಿ, ಸಾಧಿಸಲು ಅಡ್ಡಿ ಯಾವೂದೂ ಇಲ್ಲ ಗುರಿಯೊಂದೇ ಮುಖ್ಯವಾಗಬೇಕು ಎನ್ನುತ್ತಾರೆ. ಮಾತಿನ ಮೂಲಕ ಮೋಡಿ ಮಾಡುವ ಶಕ್ತಿ ಇವರದ್ದು, ಅನೇಕರ ಮೇಲೆ ಉತ್ತಮ ಪರಿಣಾಮ ಬೀರಿ ಬದಲಾವಣೆಗಳನ್ನು ಕಾಣಿಸಿದ್ದಾರೆ. ಅಪಾರ ಅಭಿಮಾನಿಗಳನ್ನೂ ದಿನದಿಂದ ದಿನಕ್ಕೆ ಸಂಪಾದಿಸುತ್ತಲೇ ಇದ್ದಾರೆ.

ಮೈತ್ರೇಯಿ ಅವರು ದಾನ ಧರ್ಮಗಳ ಮೂಲಕವೂ ಹಲವರ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ನಿರಾಶ್ರಿತತೆಯನ್ನು ಅನುಭವಿಸುತ್ತಿರುವ ಜನರಿಗೆ ಆಹಾರ ನೀಡುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮಾತ್ರವಲ್ಲದೆ ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‌ನಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲು ತನ್ನ ಪ್ರದರ್ಶನಗಳಿಂದ ಬಂದ ಹಣವನ್ನು ಬಳಸಿ ಹೃದಯ ವೈಶಾಲ್ಯತೆ ತೋರಿದ್ದಾರೆ.

ತನ್ನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಉತ್ಸಾಹವನ್ನು ತುಂಬುವ ಮೈತ್ರೇಯಿ, ಸಾಧಿಸಲು ಅಡ್ಡಿ ಯಾವೂದೂ ಇಲ್ಲ ಗುರಿಯೊಂದೇ ಮುಖ್ಯವಾಗಬೇಕು ಎನ್ನುತ್ತಾರೆ. ಮಾತಿನ ಮೂಲಕ ಮೋಡಿ ಮಾಡುವ ಶಕ್ತಿ ಇವರದ್ದು, ಅನೇಕರ ಮೇಲೆ ಉತ್ತಮ ಪರಿಣಾಮ ಬೀರಿ ಬದಲಾವಣೆಗಳನ್ನು ಕಾಣಿಸಿದ್ದಾರೆ. ಅಪಾರ ಅಭಿಮಾನಿಗಳನ್ನೂ ದಿನದಿಂದ ದಿನಕ್ಕೆ ಸಂಪಾದಿಸುತ್ತಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next