Advertisement

ಫ‌ಲಿತಾಂಶದ ನಂತರ ದೂರವಾಗಲಿದೆ ಬಿಜೆಪಿ ಭ್ರಮೆ

11:59 AM Apr 10, 2017 | |

ಕೆ.ಆರ್‌.ಪುರ: ಉತ್ತರಪ್ರದೇಶ ಚುನಾವಣೆಯಲ್ಲಿ ಗೆದ್ದಂತೆ ರಾಜ್ಯದಲ್ಲೂ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್ಯ ಸಚಿವ ಎಚ್‌.ಕೆ.ಪಾಟೀಲ್‌ ವ್ಯಂಗ್ಯವಾಡಿದ್ದಾರೆ. 

Advertisement

ಕೆಆರ್‌ ಪುರ ಕ್ಷೇತ್ರದ ಚೇಳಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ “ನಾರ್ತ್‌ ಬೆಂಗಳೂರು’ ಅಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, “ಬಿಜೆಪಿ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಎತ್ತರದ ಧ್ವನಿಯಲ್ಲಿ ಗುಟುರು ಹಾಕುತ್ತಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಸೋಲುವ ಮೂಲಕ ಬಿಜೆಪಿ ಭ್ರಮೆಯಿಂದ ಹೊರಬರಲಿದೆ,’ ಎಂದು ಕುಟುಕಿದರು. 

“ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲವು ವಿಶ್ವಾಸವಿದೆ. ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ವಿಶೇಷ ಒತ್ತುನೀಡಿ ಕಾರ್ಯರೂಪಕ್ಕೆ ತಂದಿರುವ ಹಲವು ಜನರಪರ ಯೋಜನೆಗಳು ಜನರ ಮನ್ನಣೆ ಗಳಿಸಿವೆ. ಜನರು ಕಾಂಗ್ರೆಸ್‌ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಬಿಜೆಪಿ ನಾಯಕರ ಅಪಪ್ರಚಾರದ ಮಾತುಗಳನ್ನು ಜನತೆ ತಿರಸ್ಕರಿಸಿದ್ದಾರೆ,’ ಎಂದರು.  

ಚೇಳಕೆರೆಯಲ್ಲಿ ಸ್ಥಾಪನೆಯಾಗಿರುವ “ನಾರ್ತ್‌ ಬೆಂಗಳೂರು’ ಅಸ್ಪತ್ರೆ ಅತ್ಯಾಧುನಿಕ  ತಂತ್ರಜಾnನ ಹಾಗೂ ಸುಸುಜ್ಜಿತ ವ್ಯವಸ್ಥೆಯಿಂದ ಕೂಡಿದೆ. ಅಸ್ಪತ್ರೆಯಲ್ಲಿ ಮಕ್ಕಳ ಘಟಕ, ಡಯಾಲಿಸಿಸ್‌ ಕೇಂದ್ರ ಸೇರಿದಂತೆ ನಾನಾ ಸವಲತ್ತುಗಳಿದ್ದು, ನಾಗರಿಕರಿಗೆ ನೆರವಾಗಲಿದೆ,’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next