Advertisement

ಮುಲಾಯಂ ಆಶೀರ್ವಾದ ಪಡೆದ ಅಪರ್ಣಾ

12:08 AM Jan 22, 2022 | Team Udayavani |

ಲಕ್ನೋ: ಬುಧವಾರದಂದು ಹೊಸದಿಲ್ಲಿಯಲ್ಲಿ ಬಿಜೆಪಿ ಸೇರಿಕೊಂಡ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ರ ಸೊಸೆ, ದಿಲ್ಲಿಯಿಂದ ಲಕ್ನೋಗೆ ಮರಳುತ್ತಿದ್ದಂತೆಯೇ ಮಾವನ ಬಳಿ ತೆರಳಿದ್ದಾರೆ.

Advertisement

ಮಾವ ಮುಲಾಯಂ ಸಿಂಗ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನು ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಬಿಜೆಪಿ ಸದಸ್ಯತ್ವ ಪಡೆದ ಅನಂತರ ಅಪ್ಪಾಜಿ/ನೇತಾಜಿ ಅವರ ಆಶೀರ್ವಾದ ಪಡೆದೆನು’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೇ ದಿಲ್ಲಿಯಿಂದ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ತತ್‌ಕ್ಷಣ ತಮಗೆ ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸಿಕ್ಕಿದ್ದಾಗಿಯೂ ಅವರು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next