Advertisement

ಲಾಲು ಜಾಗರಣೆ; ಬಿಸ್ಕತ್‌, ಚಹಾ ಸೇವಿಸಿದ ಆರ್‌ಜೆಡಿ ಮುಖ್ಯಸ್ಥ

12:05 PM Dec 25, 2017 | Team Udayavani |

ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಶನಿವಾರ ರಾತ್ರಿ ನಿದ್ದೆಯೇ ಬಂದಿಲ್ಲ. ಹೀಗೆಂದು ಜೈಲಿನ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಅವರಿಗೆ ಚಹಾ ಮತ್ತು ಬಿಸ್ಕತ್‌ಗಳನ್ನು ನೀಡಲಾಯಿತು.

Advertisement

ಭಾನುವಾರ ರಜಾದಿನವಾದ್ದರಿಂದ ಯಾರಿಗೂ ಭೇಟಿಗೆ ಅನುಮತಿ ನೀಡಲಾಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಬೆಂಬಲಿಗರಿಗೆ, ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಆರ್‌ಜೆಡಿ ಮುಖ್ಯಸ್ಥ ಮನವಿ ಮಾಡಿಕೊಂಡರೆ ಅವರಿಗೆ ಸೊಳ್ಳೆಯಿಂದ ರಕ್ಷಣೆ ನೀಡುವಂಥ ಸೊಳ್ಳೆ ಪರದೆ ನೀಡಲಾಗುತ್ತದೆ. ಒಂದು ದಿನಪತ್ರಿಕೆ, ಟಿವಿ ನೋಡಲು ಅವಕಾ ಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ. ಅವರಿಗೆ ಮನೆಯ ಊಟ ನೀಡಲು ಅನುಮತಿ ಇದೆಯಾದರೂ, ಅವರೇ ಸ್ವತಃ ಸೆಲ್‌ನಲ್ಲಿ ಅಡುಗೆ ಮಾಡುವ ಅವಕಾಶ ನೀಡಲಾಗಿದೆ. 2014ರಲ್ಲಿ ಹೃದಯ ಶಸ್ತ್ರ  ಚಿಕಿತ್ಸೆಗೆ ಒಳಗಾಗಿರುವುದರಿಂದ ಅವರು ಕಟ್ಟುನಿಟ್ಟಿನ ಆಹಾರ ಪದ್ಧತಿಯಲ್ಲಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next