Advertisement

ವಿಮಾನ ವಿಳಂಬ: ಕೇಂದ್ರ ಸಚಿವರಿಗೆ ಜನರ ತರಾಟೆ

06:20 AM Dec 15, 2017 | Team Udayavani |

ನವದೆಹಲಿ: ಏರ್‌ ಇಂಡಿಯಾ ವಿಮಾನ ಟೇಕಾಫ್ ಮಾಡಲು ತಡವಾದ ಕಾರಣ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿ ರಾಜು ಅವರಿಗೆ ಪ್ರಯಾಣಿಕರೇ ಬೆವರಿಳಿಸಿದ ಘಟನೆ ಬುಧವಾರ ನಡೆದಿದೆ. ಉತ್ತರಿಸಲಾಗದೇ ತಡವರಿಸಿದ ಸಚಿವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಪೈಲಟ್‌ ಹಾಗೂ ಸಹ ಪೈಲಟ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಮುಂಜಾನೆ 6 ಗಂಟೆ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ವಿಜಯವಾಡಕ್ಕೆ  ಪ್ರಯಾಣಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ  ಹಿನ್ನೆಲೆಯಲ್ಲಿ ವಿಮಾನಯಾನ ನಿರ್ವಹಣಾ ವಿಭಾಗವು ಕೆಲ ಸಮಯ ಕಾಯುವಂತೆ ಪೈಲೆಟ್‌ಗೆ ನಿರ್ದೇಶನ ನೀಡಿತ್ತು. ಆದರೆ ಇದು ಕೆ‌ಳಹಂತದ ಸಿಬ್ಬಂದಿಗೆ ಗೊತ್ತಿರಲಿಲ್ಲ. ಹೀಗಾಗಿ ಸಿಬ್ಬಂದಿ 125 ಮಂದಿ ಪ್ರಯಾಣಿಕರನ್ನು ನಿಗದಿತ ಸಮಯಕ್ಕೆ ವಿಮಾನದೊಳಕ್ಕೆ ಕುಳಿತುಕೊಳ್ಳುವಂತೆ ಹೇಳಲಾಗಿತ್ತು. ಇವರ‌ಲ್ಲಿ ಸಚಿವ ಅಶೋಕ್‌ ಗಜಪತಿ ಕೂಡ ಇದ್ದರು. ಹೀಗಾಗಿ ಪ್ರಯಾಣಿಕರ ಆಕ್ರೋಶವನ್ನು ಸಚಿವರು ಜತೆ ಇದ್ದೇ ಎದುರಿಸುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next