Advertisement

‘12th Fail’ ಬಳಿಕ ಮತ್ತೊಂದು ನೈಜ ಕಥೆಯಲ್ಲಿ ನಟ ವಿಕ್ರಾಂತ್:‌ ಏಕ್ತಾ ಕಪೂರ್‌ ನಿರ್ಮಾಣ

04:17 PM Jan 16, 2024 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಇತ್ತೀಚೆಗೆ ತೆರೆಕಂಡಿದ್ದ‌ 12th ಫೇಲ್ ಭರ್ಜರಿ ಕಮಾಯಿ ಮಾಡುವ ಮೂಲಕ ಸದ್ದು ಮಾಡಿತ್ತು. ಆ ಬಳಿಕ ನಟ ವಿಕ್ರಾಂತ್ ಮಾಸ್ಸೆ ಅವರ ಬೇಡಿಕೆ ಹೆಚ್ಚಾಗಿದೆ. 12th ಫೇಲ್ ಬಳಿಕ ವಿಕ್ರಾಂತ್‌ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

Advertisement

ವಿಧು ವಿನೋದ್ ಚೋಪ್ರಾ ನಿರ್ದೇಶನದ ‘12th Fail’ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ಜೀವನಚರಿತ್ರೆಯ ಕಥೆಯನ್ನೊಳಗೊಂಡಿದೆ. ನಿಜ ಜೀವನದ ಕಥೆಯನ್ನು ತೆರೆ ಮೇಲೆ ಸ್ಪೂರ್ತಿದಾಯಕವಾಗಿ ವಿದು ವಿನೋದ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: Thalaivar 172: ಮತ್ತೆ ರಜಿನಿ ಜೊತೆ ನೆಲ್ಸನ್‌ ಸಿನಿಮಾ; ʼಜೈಲರ್‌ -2ʼಗೆ ತಯಾರಿ?

ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 55 ಕೋಟಿ ರೂ. ಗಳಿಕೆ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿತ್ತು. ಈ ಸಿನಿಮಾದ ಬಳಿಕ ವಿಕ್ರಾಂತ್‌ ಅವರನ್ನು ಆರಿಸಿಕೊಂಡು ಹತ್ತಾರು ಸ್ಕ್ರಿಪ್ಟ್‌ ಗಳು ಬಂದಿವೆ. ಅದರಲ್ಲಿ ವಿಕ್ರಾಂತ್‌ ನೈಜ ಘಟನೆಯ ಮತ್ತೊಂದು ಕಥೆಯನ್ನು ಆಯ್ದುಕೊಂಡಿದ್ದಾರೆ.

ಈ ಹಿಂದೆ ವೆಬ್‌ ʼಗ್ರಹಣ್‌ʼ ಎನ್ನುವ ವೆಬ್‌ ಸೀರಿಸ್‌ ಮಾಡಿ ಗಮನ ಸೆಳೆದಿದ್ದ ರಂಜನ್ ಚಾಂಡೆಲ್ ಅವರೊಂದಿಗೆ ವಿಕ್ರಾಂತ್‌ ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. 2002ರ ಇಸವಿ ಭಾರತದಲ್ಲಿ ನಡೆದ ಘಟನೆಯೊಂದರ ಕಥೆಯನ್ನು ಸಿನಿಮಾ ಒಳಗೊಂಡಿದೆ. ಈ ಘಟನೆ ರಾಷ್ಟ್ರವನ್ನು ಬೆಚ್ಚಿಬೀಳಿಸಿತು ಮತ್ತು ಭಾರತದಲ್ಲಿನ ರಾಜಕೀಯ ಸನ್ನಿವೇಶ ಬದಲಾಗಲು ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.

Advertisement

ಈ ಸಿನಿಮಾಕ್ಕೆ ʼದಿ ಸಬರಮತಿ ರಿಪೋರ್ಟ್ʼ ಎಂದು ಟೈಟಲ್‌ ಇಡಲಾಗಿದೆ.  ರೈಲಿಗೆ ಬೆಂಕಿ ಹಚ್ಚಿದ ಈ ಘಟನೆಯ ಬಳಿಕ ಗುಜರಾತಿನಲ್ಲಿ ಹೆಚ್ಚಿನ ಕೋಮುಗಲಭೆ ಉಂಟಾಗಿತ್ತು. ಇದೇ ಕಥೆಯನ್ನಿಟ್ಟುಕೊಂಡು ವಿಕ್ರಾಂತ್‌ ಅವರ ಸಿನಿಮಾ ಬರಲಿದೆ. ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಮೇ.4 ರಂದು ಸಿನಿಮಾ ತೆರೆ ಕಾಣಲಿದೆ.

ಪೊಲಿಟಿಕಲ್‌ ಥ್ರಿಲ್ಲರ್‌ ಕಥೆಯಲ್ಲಿ ವಿಕ್ರಾಂತ್‌ ಕಾಣಿಸಿಕೊಳ್ಳಲಿದ್ದು,ಈ ಸಿನಿಮಾವನ್ನು ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್‌ ನಿರ್ಮಾಣ ಮಾಡುತ್ತಿದ್ದಾರೆ.

ಶೀಘ್ರದಲ್ಲಿ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next