Advertisement

ರಶೀದ್‌ ಖಾನ್‌ರನ್ನು ಭಾರತಕ್ಕೆ ಬಿಟ್ಟುಕೊಡಲ್ಲ

07:50 AM May 27, 2018 | Team Udayavani |

ನವದೆಹಲಿ: ಅಫ್ಘಾನಿಸ್ಥಾನದ 19 ವರ್ಷದ ಎಳೆಯ ಕ್ರಿಕೆಟಿಗ ರಶೀದ್‌ ಖಾನ್‌ ಹೈದರಬಾದನ್ನು ಫೈನಲ್‌ಗೇರಿಸಿದ್ದೇ ತಡ, ಅವರ ಕುರಿತು ಪ್ರಶಂಸೆಯ ಸುರಿಮಳೆ ಶುರುವಾಗಿದೆ. ಒಂದಷ್ಟು ಭಾರತೀಯರು ರಶೀದ್‌ಗೆ ಭಾರತೀಯ ಪೌರತ್ವ ಕೊಡಿ ಎಂದು ಒತ್ತಾಯಿಸಿದ್ದಾರೆ. 

Advertisement

ಇದರ ಬೆನ್ನಲ್ಲೇ ಆಫ್ಘಾನಿಸ್ಥಾನದ ಅಧ್ಯಕ್ಷ ಘನಿ ಅಶ್ರಫ್ ತಮಾಷೆಯಾಗಿ ಪ್ರತಿಕ್ರಿಯಿಸಿ, ರಶೀದ್‌ ನಮ್ಮ ದೇಶದ ಆಸ್ತಿ. ಅವರನ್ನು ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

“ರಶೀದ್‌ ಖಾನ್‌ ನಮ್ಮ ದೇಶದ ಹೆಮ್ಮೆ. ನಮ್ಮ ದೇಶದ ಆಟಗಾರರಿಗೆ ತಮ್ಮ ಪ್ರತಿಭೆ ತೋರಲು ಇಂತಹ ಅವಕಾಶ ಕೊಟ್ಟಿರುವ ಭಾರತೀಯರಿಗೆ ವಂದಿಸುತ್ತೇನೆ. ಆಫ್ಘಾನಿಸ್ಥಾನಕ್ಕೆ ಯಾವುದು ಒಳಿತು ಎನ್ನುವುದನ್ನು ರಶೀದ್‌ ನಮಗೆ ನೆನಪಿಸಿದ್ದಾರೆ’ ಎಂದೂ ಅಶ್ರಫ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next