Advertisement

ಜಾಹೀರಾತು ನಿಷೇಧ ಪ್ರಸ್ತಾಪ ನನೆಗುದಿಗೆ

12:30 AM Mar 06, 2019 | |

ಹೊಸದಿಲ್ಲಿ: ಮತದಾನ ನಡೆಯುವ ದಿನ ಪತ್ರಿಕೆಗಳಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪ್ರಕಟವಾಗದಂತೆ ನಿಷೇಧ ಹೇರುವ ಚುನಾವಣಾ ಆಯೋಗದ ಪ್ರಸ್ತಾಪ ಸದ್ಯಕ್ಕೆ ಜಾರಿಯಾಗುವುದಿಲ್ಲ. ಚುನಾವಣಾ ಆಯೋಗದ ಪ್ರಸ್ತಾಪಕ್ಕೆ ಕೇಂದ್ರದ ಕಾನೂನು ಸಚಿವಾಲಯ ಇನ್ನೂ ಒಪ್ಪಿಗೆ ನೀಡದ ಕಾರಣ, ಮುಂಬರುವ ಲೋಕಸಭೆ ಚುನಾವಣೆಗೆ ಇದು ಅನುಷ್ಠಾನವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. 

Advertisement

ಈ ಪ್ರಸ್ತಾಪ ಜಾರಿಯಾಗಬೇಕೆಂದರೆ, ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಬಜೆಟ್‌ ಅಧಿವೇಶನದ ವೇಳೆಯೂ ಕಾನೂನು ಸಚಿವಾಲಯವು ಈ ಪ್ರಸ್ತಾಪವನ್ನು ಸಂಪುಟಕ್ಕೆ ಒಯ್ಯಲು ಮನಸ್ಸು ಮಾಡಿಲ್ಲ. ಹೀಗಾಗಿ, ಇದು ನನೆಗುದಿಗೆ ಬಿದ್ದಿದೆ. ಇನ್ನು ಈ ಕುರಿತು ನಿರ್ಧಾರ ಕೈಗೊಳ್ಳುವುದು ಬಿಡುವುದು ಮುಂದಿನ ಲೋಕಸಭೆಗೆ ಬಿಟ್ಟಿದ್ದು ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next