Advertisement

ಮುಂದುವರಿದ ಕಡಲ್ಕೊರೆತ; ರಸ್ತೆಗೆ ಹಾನಿ

01:24 AM Aug 08, 2019 | Team Udayavani |

ಉಳ್ಳಾಲ: ಉಳ್ಳಾಲ ವ್ಯಾಪ್ತಿಯಲ್ಲಿ ಬುಧವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಗಾಳಿಯಿಂದ ಸೋಮೇಶ್ವರ, ಉಚ್ಚಿಲ ಬಟ್ಟಪ್ಪಾಡಿ, ಉಳ್ಳಾಲದಲ್ಲಿ ಕಡಲ್ಕೊರೆತವಾಗಿದೆ. ಬಟ್ಟಪ್ಪಾಡಿಯಲ್ಲಿ 10ಕ್ಕೂ ಹೆಚ್ಚು ತೆಂಗಿನ ಮರಗಳು ಸಮುದ್ರಪಾಲಾಗಿವೆ. ಬೀಚ್‌ರಸ್ತೆ ಅಪಾಯದಲ್ಲಿದೆ.

Advertisement

ಸೋಮೇಶ್ವರ ದೇವಸ್ಥಾನದಿಂದ ಸಮುದ್ರ ತೀರಕ್ಕೆ ಇಳಿಯಲು ಪ್ರವಾಸೋದ್ಯಮ ಇಲಾಖೆ ಮಾಡಿದ್ದ ಮೆಟ್ಟಿಲುಗಳು ಸಮುದ್ರಪಾಲಾಗಿವೆ. ಸಮೀಪದ ನಿವಾಸಿ ಮೋಹನ್‌ ಅವರ ಮನೆ ಅಪಾಯದಲ್ಲಿದೆ.
ಬಟ್ಟಪ್ಪಾಡಿಯಲ್ಲಿ ಸುಮಾರು 100 ಮೀ. ಉದ್ದದವರೆಗೆ ರಸ್ತೆ ಸಮುದ್ರಪಾಲಾಗುವ ಭೀತಿಯಲ್ಲಿದೆ. ಶಾಶ್ವತ ಕಾಮಗಾರಿ ಅರ್ಧಕ್ಕೆ ನಿಂತಿರುವುದೇ ಬೀಚ್‌ ರಸ್ತೆ ಕೊರೆತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮರಗಳು ಕಡಲಿಗಾಹುತಿ
ಕಾಪು: ಕಾಪು ಪುರಸಭೆ ವ್ಯಾಪ್ತಿಯ ಕಾಪು ತೊಟ್ಟಂ ಮತ್ತು ಮೂಳೂರು ಗೆಸ್ಟ್‌ ಹೌಸ್‌ ಬಳಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ತೆಂಗಿನ ಮರಗಳು ಮತ್ತು ಗಾಳಿ ಮರಗಳು ಕಡಲಿಗೆ ಆಹುತಿಯಾಗಿವೆ. ಕಂದಾಯ ಅಧಿಕಾರಿ ಗಳು ಪರಿಶೀಲನೆ ನಡೆಸಿದ್ದಾರೆ.

ತೊಟ್ಟಂ, ಕದಿಕೆಯಲ್ಲಿ ಕೊರೆತ
ಮಲ್ಪೆ: ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಕಡಲ ಅಬ್ಬರವು ಹೆಚ್ಚಾಗಿದೆ. ಸಮುದ್ರದಲ್ಲಿ ತೀವ್ರವಾಗಿ ಗಾಳಿ ಬೀಸುತ್ತಿದ್ದು ತೊಟ್ಟಂ, ಕದಿಕೆ ಭಾಗದಲ್ಲಿ ಕೊರೆತವಾಗಿದೆ.

ಬೈಂದೂರು: ಬೈಂದೂರು, ಮರವಂತೆ, ಗಂಗೊಳ್ಳಿ ಭಾಗದಲ್ಲಿ ಕಡಲು ಪ್ರಕ್ಷುಬ್ಧವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next