Advertisement

ಮುಂದುವರಿದ ಗೀತಾವಿಷ್ಣು ವಿಚಾರಣೆ

11:20 AM Oct 10, 2017 | |

ಬೆಂಗಳೂರು: ಮದ್ಯ ಸೇವಿಸಿ ರಸ್ತೆ ಅಪಘಾತವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೀತಾವಿಷ್ಣು, ಆತನ ಸ್ನೇಹಿತರಾದ ಪ್ರಣಾಮ್‌ ದೇವರಾಜ್‌, ಫೈಜಲ್‌, ಜುನೈದ್‌ ಸೋಮವಾರ ಮತ್ತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. 

Advertisement

ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ಅವರು ನಾಲ್ವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಇದರೊಂದಿಗೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಗೀತಾವಿಷ್ಣುನನ್ನು ಪೊಲೀಸರ ಕಣ್ಗಾವಾಲಿನ ಮಧ್ಯೆಯೂ ಆಸ್ಪತ್ರೆಯಿಂದ ಪರಾರಿಯಾಗಲು ಸಹಕರಿಸಿದ ಆರೋಪದ ಮೇರೆಗೆ ಮಲ್ಯ ಆಸ್ಪತ್ರೆಯ ಐವರು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಆದರೆ, ಸಿಬ್ಬಂದಿ ಹೇಳುವ ಪ್ರಕಾರ, ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸಹಾಯ ಮಾಡಿದ್ದೇವೆ ಎಂದಿದ್ದಾರೆ.ಈ ಸಂಬಂಧ ಮಂಗಳವಾರವೂ ಕೂಡ ಕೆಲ ಸಿಬ್ಬಂದಿಯನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೆ.28ರಂದು ನಗರದ ಸೌತ್‌ ಎಂಡ್‌ ವೃತ್ತದಲ್ಲಿ ಗೀತಾ ವಿಷ್ಣು ಅಪಘಾತ ಎಸಗಿ ನಂತರ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ವಿಷ್ಣು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಹೋದರಿ ಸಹಾಯದಿಂದ ಪರಾರಿಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next