Advertisement

BJP ವಿರುದ್ಧ ಸಭೆಯ ದಿನಾಂಕ ಮುಂದೂಡಿಕೆ

12:38 AM Jun 06, 2023 | Team Udayavani |

ಪಾಟ್ನಾ: ವಿಪಕ್ಷಗಳಿಗಾಗಿ ಹಮ್ಮಿಕೊಂಡಿರುವ ಸಭೆಯಲ್ಲಿ ಆಯಾ ಪಕ್ಷಗಳ ಮುಖ್ಯಸ್ಥರು ಮಾತ್ರ ಭಾಗವಹಿಸಬೇಕು. ಈ ಹಿಂದೆ ಜೂ.12ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ ಅದೀಗ ಮುಂದೂಡಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಎಲ್ಲ ವಿಪಕ್ಷಗಳನ್ನು ಸಂಪ ರ್ಕಿಸಿ ಸಭೆಯ ಮುಂದಿನ ದಿನಾಂಕವನ್ನು ನಿರ್ಧ ರಿಸಲಾಗುವುದು. ಈ ಹಿಂದೆ ಜೂ.12ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ ಈ ದಿನಾಂಕ ಕಾಂಗ್ರೆಸ್‌ ಮತ್ತು ಇನ್ನೊಂದು ಪಕ್ಷಕ್ಕೆ ಅನನುಕೂಲವಾಗಿತ್ತು. ಹಾಗಾಗಿ ಎಲ್ಲ ವಿಪಕ್ಷಗಳನ್ನು ಸಂಪರ್ಕಿಸಿ ಸೂಕ್ತ ದಿನಾಂಕವನ್ನು ನಿರ್ಧರಿಸುವಂತೆ ಕಾಂಗ್ರೆಸ್‌ಗೆ ತಿಳಿಸಲಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next