Advertisement

Adipurush: ತುರ್ತು ವಿಚಾರಣೆಗೆ ಸುಪ್ರೀಂ ನಕಾರ 

09:10 PM Jul 12, 2023 | Team Udayavani |

ನವದೆಹಲಿ: ವಿವಾದಿತ “ಆದಿಪುರುಷ’ ಸಿನಿಮಾ ನಿರ್ಮಿಸಿದವರಿಗೆ ಜು.27ರಂದು ಖುದ್ದು ಹಾಜರಾಗುವಂತೆ ಅಲಾಹಾಬಾದ್‌ ಹೈಕೋರ್ಟ್‌ನ ಆದೇಶದ ವಿರುದ್ಧದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ. ಸಂಭಾಷಣೆಯ ಕಾರಣದಿಂದ ರಾಮಾಯಣವನ್ನು ಆಧರಿಸಿ ನಿರ್ಮಿಸಿರುವ “ಆದಿಪುರುಷ್‌’ ಸಿನಿಮಾ ದೇಶಾದ್ಯಂತ ಖಂಡನೆಗೆ ಗುರಿಯಾಗಿದೆ.

Advertisement

ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, ಗುರುವಾರದಂದು ಅರ್ಜಿಯ ವಿಚಾರ ಪ್ರಸ್ತಾಪಿಸುವಂತೆ ನಿರ್ಮಾಪಕರ ಪರವಾದ ನ್ಯಾಯವಾದಿಗೆ ಸೂಚಿಸಿದರು. ಜು.27ರಂದು ಖುದ್ದು ಹಾಜರಾಗುವಂತೆ ಸಿನಿಮಾದ ನಿರ್ದೇಶಕ ಓಂ ರಾವತ್‌, ನಿರ್ಮಾಪಕ ಭೂಷಣ್‌ ಕುಮಾರ್‌ ಮತ್ತು ಸಂಭಾಷಣೆ ಬರೆದ ಮನೋಜ್‌ ಮುನ್ತಾಶಿರ್‌ ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಆದೇಶಿಸಿದೆ. ಸಿನಿಮಾ ನಿಷೇಧಕ್ಕೆ ಒತ್ತಾಯಿಸಿ ಕುಲದೀಪ್‌ ತಿವಾರಿ ಮತ್ತು ನವೀನ್‌ ಧವನ್‌ ಅವರು ಸಲ್ಲಿಸಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next